ಸಂಕನೂರ, ಕೆಸರು ಗದ್ದೆಯಾದ ರಸ್ತೆ: ಜನ ಸಂಚಾರ ಅಸ್ತವ್ಯಸ್ತ.

ಸಂಕನೂರ ಗ್ರಾಮದ ಸರ್ಕಾರಿ ಶಾಲೆಯ ಮುಂದೆ ಕೆಸರು ಗದ್ದೆಯಾದ ರಸ್ತೆಯ ಚಿತ್ರಣ. ಚಿತ್ತಾಪುರ: ಅಳ್ಳೂಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕನೂರ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರದ ಮುಂದಿನ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟು, ಜನಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಗ್ರಾಮದ ಮುಖ್ಯರಸ್ತೆಯಾಗಿದ್ದು. ಈ ರಸ್ತೆಯಲ್ಲಿ ಸಾಕಷ್ಟು ಜನರು ಶಾಲಾ ವಿದ್ಯಾರ್ಥಿಗಳು, ನಡೆದಾಡುತ್ತಾರೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಈ ರಸ್ತೆ ದುರಸ್ತೇಗೆ ಮನವಿ ಮಾಡಿದ್ರು ಪ್ರಯೋಜನವಾಗುತ್ತಿಲ್ಲ . ಈಗಾಗಲೇ ಈ ರಸ್ತೆಯಿಂದಾಗಿ ಬೈಕ್ ಸವಾರರಿಗೆ ಸಾಕಷ್ಟು ಸಣ್ಣ-ಪುಟ್ಟ ಅನಾಹುತಗಳು ಆಗಿದ್ದು. ಶಾಲಾ ವಿದ್ಯಾರ್ಥಿಗಳು ಬಿದ್ದು ಸಮವಸ್ತ್ರ ಗಲೀಜು ಮಾಡಿಕೊಂಡ ಸಂದರ್ಭಗಳು ಇವೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ರಸ್ತೆ ಕಾಮಗಾರಿಯನ್ನು ಕೈಯೆತ್ತಿಕೊಂಡು ಕೆಸರುಗದ್ದೆಯಾದ ರಸ್ತೆಯನ್ನು ಒಳ್ಳೆಯ ರಸ್ತೆಯನ್ನಾಗಿ ಮಾಡಿಕೊಡಬೇಕಾಗಿ ಗ್ರಾಮಸ್ಥರಾದ ಸಾಹೇಬ್ ಗೌಡ, ಮಂಜುನಾಥ್, ಮಹಾದೇವ್, ನಾಗಪ್ಪ, ಅಂಬರೀಶ್, ಒತ್ತಾಯಿಸಿದ್ದಾರೆ.