ಚಿತ್ತಾಪೂರ: ಈ ಬಾರಿ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು ಆದ್ರೇ ಚಿತ್ತಾಪುರ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸದೆ ಅವಮಾನ ಮಾಡಿದ್ದು ಕಂಡುಬಂದಿದೆ. ಪಟ್ಟಣದ ನ್ಯಾಯಾಲಯ, ಕರ್ನಾಟಕ ಗ್ರಾಮೀಣ ಬ್ಯಾಂಕ,ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯ, ಬಿಜೆಪಿ ಮಂಡಲ ಕಾರ್ಯಾಲಯ, ಜೆಡಿಎಸ್ ಕಾರ್ಯಾಲಯ, ಭಾರತೀಯ ಸ್ಟೇಟ್ ಬ್ಯಾಂಕ, ಎಸ್ ಬಿಐ ಬ್ಯಾಂಕ, ರೈಲುನಿಲ್ದಾಣ, ಸೇರಿದಂತೆ ಈ ಎಲ್ಲಾವುಗಳಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡದೆ ಕನ್ನಡಿಗರಿಗೆ ರಾಜ್ಯ ಸರ್ಕಾರಕ್ಕೆ ಅವಮಾನ ಮಾಡಿದಂತೆ ಆಗಿದೆ ಎನ್ನಲಾಗುತ್ತಿದೆ. ಕೊಡಲೇ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾ ಆಡಳಿತ ಎಚ್ಚತ್ತುಕೊಂಡು ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೆ ಅವಮಾನಿಸಿದ ಈ ಎಲ್ಲಾ ಕಾರ್ಯಾಲಯ, ಬ್ಯಾಂಕ, ರೈಲುನಿಲ್ದಾಣ, ನ್ಯಾಯಾಲಯ ವಿರುದ್ಧ ಕ್ರಮ ಕೈಗೊಂಡು ಕಾನೂನು ರೀತಿಯಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಲಾಗಿದೆ. ಪಟ್ಟಣದಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೆ ಅವಮಾನ ಮಾಡುವುದು ಇದೇನು ಹೊಸದಲ್ಲ, ಪದೇ ಪದೇ ಕನ್ನಡ ಭಾಷೆಗೆ ಅವಮಾನ ಆಗುತ್ತಿದೆ. ಇದರ ಕುರಿತು ಸಾಕಷ್ಟು ಬಾರಿ ಮನವಿ ಹೋರಾಟ ಮಾಡಿದ್ರು ಪ್ರಯೋಜನವಾಗಿಲ್ಲ ಎನ್ನುತ್ತಾರೆ. - ಚಂದರ ಚವ್ಹಾಣ್ ಕರವೇ, ಅಧ್ಯಕ್ಷರು ಚಿತ್ತಾಪುರ. ತಾಲ್ಲೂಕು ಆಡಳಿತ ವತಿಯಿಂದ ನಡೆದ 69ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಹಳೆಯ ಭುವನೇ...