ಬೇಣ್ಣೂರಕರಗೆ ಬಿಜೆಪಿ ಟಿಕೆಟ್ ನೀಡಲು ಸ್ಥಳೀಯರ ಒತ್ತಾಯ.

ಚಿತ್ತಾಪೂರ:  ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಹಾಗೂ ಚಿತ್ತಾಪೂರ ಮೀಸಲು ಮತಕ್ಷೇತ್ರದ ಪ್ರಬಲ ಆಕಾಂಕ್ಷಿ ಬಸವರಾಜ ಬೆಣ್ಣೂರಕರ್ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಸ್ಥಳೀಯರು ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದರು.

ಡಿ.ಎಸ್ ನಾಮದಾರ್ ಮಾತನಾಡಿ ಸ್ವಾತಂತ್ರ್ಯ ಬಂದ ನಂತರ ಸ್ಥಳೀಯವಾಗಿ ಶಾಸಕರಾದವರು ವಿಶ್ವನಾಥ್ ಪಾಟೀಲ್, ವಾಲ್ಮೀಕಿ ನಾಯಕ್ ಬಿಟ್ರು ಉಳಿದ ಬೇರೆಯವರೇ ಶಾಸಕರಾಗಿದ್ದಾರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೇರೆಯವರಿಗೆ ಮಣೆ ಹಾಕುವುದು ಬಹುಶಃ ಅಷ್ಟು ಸಮಂಜಸವಲ್ಲ ಹೀಗಾಗಿ ಸ್ಥಳೀಯವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂಬುದು ಈ ನಮ್ಮ ಸ್ಥಳೀಯರ ಒತ್ತಾಯವಾಗಿದೆ.
ಈಗಾಗಲೇ ಬಸವರಾಜ್ ಬೆಣ್ಣೊರಕರ್ ಅವರು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷರು ಆಗಿದ್ದಾರೆ  ಹಾಗೂ ಈ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಸಂಘಟನೆಗಳಲ್ಲಿ ನೇತೃತ್ವ ವಹಿಸಿ ಪ್ರತಿ ಸಮಾಜದವರ ಜೊತೆ ಪ್ರೀತಿ ಸಹ ಬಾಳ್ವೆಯಿಂದ ನಡೆದುಕೊಂಡು ಬಂದವರು ಹೀಗಾಗಿ ಸ್ಥಳೀಯವಾಗಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸೂಕ್ತವಾದ ಅಭ್ಯರ್ಥಿಯಾಗಿದ್ದಾರೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಬಿಜೆಪಿ ಕೇಂದ್ರ ರಾಜ್ಯದ ಪ್ರಭಾವಿ ನಾಯಕರಿಗೆ ಭೆಟ್ಟಿಯಾಗಿ ಬಸವರಾಜ ಬೆಣ್ಣೊರಕರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುವುದಾಗಿ ಹೇಳಿದರು ಈಗಾಗಲೇ ನಮ್ಮ ಪಕ್ಷದಲ್ಲಿ ಸುಮಾರು ಜನ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದು ನಾವ್ಯಾರು ಅವರನ್ನು ಟಿಕೆಟ್ ನೀಡಬಾರದು ಎಂದು ಬಯಸುತ್ತಿಲ್ಲ. ಸ್ಥಳೀಯರನ್ನು ಟಿಕೆಟ್ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಪಕ್ಷಿ ಯಾರಿಗೆ ಟಿಕೆಟ್ ನೀಡಿದರೂ ಸಹ ನಾವು ಒಗ್ಗಟ್ಟಿನಿಂದ ಚುನಾವಣೆ ಮಾಡುವುದಾಗಿ ತಿಳಿಸಿದ್ದಾರೆ.  

ಈ ಸಂದರ್ಭದಲ್ಲಿ ಬಸವರಾಜ್ ಸಾಹುಕಾರ್, ಮಲ್ಲಿನಾಥ ಇಂದನೂರ್ ಬಾಬುಮಿಯ ಕಲಗುರ್ತಿ, ಶರಣಗೌಡ ಪಾಟೀಲ್ ಸಂಗನಗೌಡ ಅಳ್ಳೊಳ್ಳಿ, ಅಪ್ಪಾರಾವ್ ಮುಗಳನಾಗಂವ್, ಹಣಮಂತ ಪೂಜಾರಿ, ಬಾಲಕೃಷ್ಣ ಜೋಶಿ ಮಲಗತ್ತಿ, ಸಂಗಣ್ಣ ನಾಗ್ ಶೆಟ್ಟಿ, ಖಾಜಾ ಹುಸೇನ್ ದಿಗ್ಗಾಂವ್, ಮಲ್ಲಿಕಾರ್ಜುನ್ ಪೂಜಾರಿ ಶಿವಯ್ಯ ಗುತ್ತೇದಾರ್, ಮಲ್ಲಿಕಾರ್ಜುನ್ ಇಟಗಾ, ಅನಿಲ್ ಕುಮಾರ್ ಇಂಗೇನ್ಕಲ್, ಕಾರಣ ಕುಮಾರ್ ಅಲ್ಲೂರ್, ಮಂಜು ಪೂಜಾರಿ ಜೀವಣಗಿ, ಮುನಿಯಪ್ಪ ದೇಸಾಯಿ ಕದ್ದರಗಿ, ಶರಣು, ಕಾಶೀನಾಥ್ ಮಾಲಗತ್ತಿ, ದಿಲೀಪ್ ದೊಡ್ಮನಿ, ಭರತ್ ಮುತ್ತಗಾ, ಗುರುರಾಜ್ ಗುಂಡಗುರ್ತಿ, ಸೇರಿದಂತೆ ಇತರರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.

ಮನೆಗಳ ಹಂಚಿಕೆ ಪ್ರಕ್ರಿಯೆ ಮುಂದೂಡಲಾಗಿದೆ

ರಾಜ್ಯೋತ್ಸವ ಪ್ರಶಸ್ತಿಗೆ ಏಳು ಜನ ಸಾಧಕರ ಆಯ್ಕೆ.

ಬಜಾಜ್ ಕಾಂಪ್ಲೆಕ್ಸ್ ನಲ್ಲಿ ಅನೈತಿಕ ಚಟುವಟಿಕೆ.

ತಾಲ್ಲೂಕು ಅಧಿಕಾರಿಗಳ ವಿರುದ್ಧ ಸಚಿವರ ಅಸಮಾಧಾನ.

ಪ್ರಯಾಗರಾಜ್ ಪವಿತ್ರ ತೀರ್ಥಸ್ಥಳ: ಕಂಬಳೇಶ್ವರ ಶ್ರೀ.

ತಹಸೀಲ್ ಕಛೇರಿಯಲ್ಲಿ ಪೋಲೀಸ ಪೇದೆ ಸಾವು.

ಮಗನ ಸಾಧನೆಗೆ ತಂದೆ-ತಾಯಿ ಮೆಚ್ಚುಗೆ.