ಚಿತ್ತಾಪುರ: ಪಟ್ಟಣದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿರುವ ಕಂಬಳೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಸೋಮಶೇಖರ ಶಿವಾಚಾರ್ಯರ 59ನೇ ಜನ್ಮದಿನದ ಏಪ್ರಿಲ್ 4ರಂದು ಇದ್ದು. ಒಂದು ದಿನ ಮುಂಚಿತವಾಗಿ ಶುಕ್ರವಾರ ಪಟ್ಟಣದ ಗೋಶಾಲೆಯಲ್ಲಿ ಗೋವುಗಳಿಗೆ ಮೇವು ನೀಡುವ ವಿಶೇಷ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀಗಳ ಜನ್ಮದಿನದ ಸವಿನೆನಪಿಗಾಗಿ ಸಮಾಜ ಸೇವಕ ಅಂಬರೀಷ್ ಕಲ್ ಶೆಟ್ಟಿ ಅವರು ಗೋಶಾಲೆಗೆ ಒಂದು ಟ್ರ್ಯಾಕ್ಟರ್ ಲೋಡ್ ಕಣಕಿಯನ್ನು ಕಾಣಿಕೆಯಾಗಿ ನೀಡಿದರು
ಶ್ರೀಗಳು ತಮ್ಮ ಜನ್ಮದಿನದ ಅಂಗವಾಗಿ ಪಟ್ಟಣದ ಗೋಶಾಲೆಗೆ ಭೇಟಿ ನೀಡಿದ ಶ್ರೀ ಸೋಮಶೇಖರ ಶಿವಾಚಾರ್ಯರು, ಗೋವುಗಳಿಗೆ ಸ್ವತಃ ಮೇವು (ಕಣಕಿ) ತಿನ್ನಿಸುವ ಮೂಲಕ ಗೋಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, "ಗೋವುಗಳು ಭಾರತೀಯ ಸಂಸ್ಕೃತಿಯ ಜೀವಾಳ. ಗೋಸೇವೆಯು ಈಶ್ವರನ ಸೇವೆಗೆ ಸಮಾನವಾದುದು. ಭಕ್ತರು ಇಂತಹ ಪುಣ್ಯ ಕಾರ್ಯಗಳ ಮೂಲಕ ಗೋವುಗಳ ಹಸಿವು ನೀಗಿಸುತ್ತಿರುವುದು ಸಂತಸದ ವಿಷಯ," ಎಂದು ಆಶೀರ್ವದಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜ್ ಬಂಕಲಗಿ ರವರು ಮಾತನಾಡಿ "ಶ್ರೀಗಳ ಹುಟ್ಟುಹಬ್ಬದ ಸವಿನೆನಪಿಗಾಗಿ ಅಂಬರೀಷ್ ಕಲ್ ಶೆಟ್ಟಿ ಅವರು ಗೋಶಾಲೆಗೆ ಕಣಕಿ ಕಾಣಿಕೆ ನೀಡಿರುವುದು ಶ್ಲಾಘನೀಯ. ಗೋವುಗಳ ಪಾಲನೆಗೆ ಇಂತಹ ದಾನಿಗಳು ಪ್ರೇರಣೆಯಾಗಿದ್ದಾರೆ," ಎಂದು ತಿಳಿಸಿದರು.
"ನಮ್ಮ ಗುರುಗಳಾದ ಶ್ರೀ ಸೋಮಶೇಖರ ಶಿವಾಚಾರ್ಯರ ಜನ್ಮದಿನವನ್ನು ಆಡಂಬರವಿಲ್ಲದೆ, ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಗೋವುಗಳಿಗೆ ಮೇವು ನೀಡುವ ಸಂಕಲ್ಪ ಮಾಡಿದೆ. ಗೋವುಗಳಿಗೆ ಹಸಿವು ನೀಗಿಸುವುದು ಕೋಟಿ ಪುಣ್ಯಕ್ಕೆ ಸಮಾನ. ಶ್ರೀಗಳ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಈ ಸೇವೆಯನ್ನು ಅರ್ಪಿಸುತ್ತಿದ್ದೇನೆ," ಎಂದು ಭಕ್ತಿಪೂರ್ವಕವಾಗಿ ನುಡಿದರು.
- ಅಂಬರೀಷ್ ಕಲಶೆಟ್ಟಿ (ಸಮಾಜ ಸೇವಕರು ಚಿತ್ತಾಪೂರ )
ಈ ಸಂದರ್ಭದಲ್ಲಿ ಹಿರಿಯರಾದ ಅನ್ನದಾನ ಶಾಸ್ತ್ರಿಗಳು ಹಿರೇಮಠ್, ಶಾಂತನಂದ ಗವಾಯಿಗಳು, ವೀರಶೈವ ಸಮಾಜದ ಕಾರ್ಯದರ್ಶಿ ಆನಂದ್ ಪಾಟೀಲ್ ನರಬೂಳ್ಳಿ, ಹಾಗೂ ಗೋಶಾಲೆ ಅಧ್ಯಕ್ಷ ರಮೇಶ್ ಬೊಮ್ನಳ್ಳಿ, ವೀರಶೈವ ಸಮಾಜದ ಮುಖಂಡರಾದ ಶಿವಾನಂದ ಸ್ವಾಮಿ ಗಚ್ಚಿನಮಠ, ಸಂಜು ರೆಡ್ಡಿ ಪಾಲಪ್, ಅನಿಲ್ ವಡ್ಡಡಗಿ, ವಿಶ್ವನಾಥ್ ಕುಂಬಾರ್, ಬಸವರಾಜ್ ಹೂಗಾರ್, ಶಾಂತಕುಮಾರ್ ಹತ್ತಿ, ಪ್ರಸಾದ್ ಅವಂಟಿ, ಸುರೇಶ್ ಅಲ್ಲೂರು, ಜಗದೇವ ದಿಗ್ಗಾವ್ಕಾರ್, ಸುನಿಲ್ ಲಕ್ಕುಂಡಿ, ಮಲ್ಲಿಕಾರ್ಜುನ್ ಪೂಜಾರಿ, ಸಾಹೇಬ್ ಗೌಡ ಬಂಗಿ, ಚಂದ್ರು ಉಟ್ಗೂರು, ಸಂತೋಷ್ ಹಾವೇರಿ, ಸಾಗರ್ ಮಾಡಗಿ, ಶರಣು ಜಡಿ, ಅಂಬರೀಶ್ ಸಾತನೂರು, ಶೇಸಪ್ಪ ಬಡಿಗೇರ್ ಸೇರಿದಂತೆ ಅನೇಕ ಭಕ್ತಾದಿಗಳು ಮತ್ತು ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.