ಪ್ರಪ್ರಥಮ ಪಾರ್ಲಿಮೆಂಟ್ ಸ್ಥಾಪಿಸಿದ್ದು ಬಸವಣ್ಣ: ಸಂಜಯ ಮಾಕಲ್.


ಚಿತ್ತಾಪುರ: ಬ್ರಿಟನ್ ದೇಶದವರು ತಮ್ಮ ಸಂಸತ್
ಪ್ರಥಮ ಎನ್ನುವರು ಆದರೆ ಅದಕ್ಕೂ ಮೊದಲೇ ಕರುನಾಡಿನಲ್ಲಿ ವಿವಿಧ ವರ್ಗಗಳ ಶರಣರ ಅಭಿಪ್ರಾಯ ಪಡೆದು, ಎಲ್ಲರಿಗೂ ಮಾನ್ಯತೆ ನೀಡಿದ ಸಮಾನತೆಯ ಹರಿಕಾರ ಬಸವಣ್ಣನವರು ಜಗತ್ತಿನಲ್ಲಿಯೇ ಪ್ರಪ್ರಥಮ ಪಾರ್ಲಿಮೆಂಟ್ ಅನುಭವ ಮಂಟಪ ನಿರ್ಮಿಸಿದರು ಎಂದು ಉಪನ್ಯಾಸಕ ಸಂಜಯ ಮಾಕಲ್ ಹೇಳಿದರು.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 892 ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ದೇಶದಲ್ಲಿ ಆರ್ಯರು ಬರುವ ಮುಂಚೆ ನಮ್ಮಲ್ಲಿ ಒಗ್ಗಟ್ಟು ಇತ್ತು, ಅವರು ಬಂದ ಮೇಲೆ ಒಡೆದು ಆಳ್ತಾ ಇದ್ದಾರೆ, ಅವರು ಒಡೆದು ಆಳುವುದೇ ಧರ್ಮ ಮಾಡಿದ್ದಾರೆ ಎಂದರು.

ಬುದ್ಧ, ಬಸವಣ್ಣ, ಅಂಬೇಡ್ಕ‌ರ್ ಮೂವರು ಜಾತಿ ಪದ್ಧತಿ, ಅಸಮಾನತೆ ವಿರುದ್ಧ ಹೋರಾಡಿದವರು. ಆದರೆ ದುರ್ದೈವ ಇನ್ನೂ ಅದು ಚಾಲ್ತಿಯಲ್ಲಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ್ ಶಿವಾಚಾರ್ಯರು ಆಶೀರ್ವಚನ ನೀಡಿ, ಪ್ರಪಂಚಕ್ಕೆ ವಚನ ಸಾಹಿತ್ಯ ಸಂಪತ್ತು ಕೊಟ್ಟ ಮಹಾನ್ ಶರಣ ಬಸವಣ್ಣನವರು, ಸಮಾನತೆಯ ಸಮಾಜಕ್ಕಾಗಿ ಜಾತಿ ಪದ್ಧತಿ ನಿರ್ಮೂಲನೆ ಮಾಡಲು ಅವರು ಮಾಡಿದ ಕ್ರಾಂತಿ ಹೊಸ ಬದಲಾವಣೆಗೆ ನಾಂದಿ ಹಾಡಿತು ಎಂದರು.

ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಕಾರ್ಯದರ್ಶಿ ರಮೇಶ ಮರಗೋಳ, ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ಸಮಾರಂಭ ಉದ್ಘಾಟಿಸಿದ ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಅವರು ಮಾತನಾಡಿದರು. ವೇದಿಕೆಯಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ ಬೊಮ್ಮನಳ್ಳಿ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಕ್ರಮ್ ಪಾಶಾ, ಆನಂದ ಪಾಟೀಲ ನರಿಬೋಳ, ಶಾಂತಣ್ಣ ಚಾಳಿಕಾರ ಇದ್ದರು.

ಕಾರ್ಯಕ್ರಮದಲ್ಲಿ ಮಲ್ಲರೆಡ್ಡಿ ಗೋಪಸೇನ್, ನಾಗಣ್ಣ ವಡ್ಡಡಗಿ, ಬಸ್ಸಣ್ಣ ತಳವಾರ, ಬಸವರಾಜಗೌಡ ಹೊನ್ನಾಳ, ಬಸವರಾಜ ಕಾಳಗಿ, ಬಸವರಾಜ ಹೂಗಾ‌ರ್, ಚಂದ್ರಶೇಖರ ಉಟಗೂರ, ಬಸವರಾಜ ಸಂಕನೂರ, ಅನಿಲ್‌ ವಡ್ಡಡಗಿ, ಶ್ರೀಕಾಂತ್ ಸುಲೇಗಾಂವ, ನಾಗರಾಜ ಕಡಬೂರ, ನಾಗರಾಜ್ ರೇಷ್ಮೆ, ಪ್ರಸಾದ್ ಅವಂಟಿ, ನಾಗರಾಜ್ ಹೂಗಾರ, ಅಂಬರೀಷ್‌ ಸುಲೇಗಾಂವ್, ಸಾಯಿನಾಥ ನಿಪ್ಪಾಣಿ, ವೀರಸಂಗಪ್ಪ ಸುಲೇಗಾಂವ, ರಾಜು ಬೆಣ್ಣೆ, ಸೋಮು ಟೋಕಾಪೂರ, ರೇವಣಸಿದ್ದಪ್ಪ ಕುರಕೋಟಿ, ಸಿದ್ದು ರಾಜಾಪುರ, ರಮೇಶ ಕಾಳನೂರ ಸೇರಿದಂತೆ ಇತರರು ಇದ್ದರು.

ಸಂತೋಷ ಶಿರಾನಾಳ ನಿರೂಪಿಸಿದರು, ಡಾ. ಶಂಕರ ಕಣ್ಣಿ ಸ್ವಾಗತಿಸಿದರು, ಗ್ರೇಡ್ -2 ತಹಸೀಲ್ದಾ‌ರ್ ರಾಜಕುಮಾರ ಮರತೂರಕರ್ ವಂದಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.

ಮನೆಗಳ ಹಂಚಿಕೆ ಪ್ರಕ್ರಿಯೆ ಮುಂದೂಡಲಾಗಿದೆ

ರಾಜ್ಯೋತ್ಸವ ಪ್ರಶಸ್ತಿಗೆ ಏಳು ಜನ ಸಾಧಕರ ಆಯ್ಕೆ.

ಬಜಾಜ್ ಕಾಂಪ್ಲೆಕ್ಸ್ ನಲ್ಲಿ ಅನೈತಿಕ ಚಟುವಟಿಕೆ.

ತಾಲ್ಲೂಕು ಅಧಿಕಾರಿಗಳ ವಿರುದ್ಧ ಸಚಿವರ ಅಸಮಾಧಾನ.

ಪ್ರಯಾಗರಾಜ್ ಪವಿತ್ರ ತೀರ್ಥಸ್ಥಳ: ಕಂಬಳೇಶ್ವರ ಶ್ರೀ.

ತಹಸೀಲ್ ಕಛೇರಿಯಲ್ಲಿ ಪೋಲೀಸ ಪೇದೆ ಸಾವು.

ಮಗನ ಸಾಧನೆಗೆ ತಂದೆ-ತಾಯಿ ಮೆಚ್ಚುಗೆ.