ಮಂಗಳವಾರ, ಜನವರಿ 25, 2022

ಯೋಗ ಮಾಡುವ ಮೂಲಕ ನಿರೋಗಿಯಾಗಿ:ಸಾಲಿಮಠ.

ವಾಡಿ: ಜೀವನದಲ್ಲಿ ಪ್ರತಿಯೊಬ್ಬರೂ ಯೋಗ ಮಾಡುವುದರ ಮೂಲಕ ನಿರೋಗಿಯಾಗಿ ಜೀವನ ನಡೆಸಲು ಸಾದ್ಯ ಎಂದು ಭಾರತ ಸ್ವಾಭಿಮಾನ ಟ್ರಸ್ಟನ ಜಿಲ್ಲಾ ಅದ್ಯಕ್ಷರ ಶಿವಾನಂದ ಸಾಲಿಮಠ ಹೇಳಿದರು.

ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಭಾರತ ಸ್ವಾಭಿಮಾನ ಟ್ರಸ್ಟ, ಪತಾಂಜಲಿ ಯೋಗ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಯೋಗದಿಂದ ಆಜಾದಿಕೆ ಅಮೃತ ಮಹೋತ್ಸವದ ಅಂಗವಾಗಿ ಯೋಗದಿಂದ ಆರೋಗ್ಯ ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕರೋನಾ ಬಂದ ಮೇಲೆ ಜನರಿಗೆ ಯೋಗದ ಮಹತ್ವ ಅರ್ಥವಾಗುತ್ತಿದೆ. ಇವತ್ತಿನ ಕಲುಷಿತ ಸಮಾಜದಲ್ಲಿ ದೀರ್ಘಕಾಲ ಆರೋಗ್ಯಯುತವಾಗಿ ಜೀವನ ಸಾಗಿಸಲು ಯೋಗ ಅತ್ಯಂತ ಅವಶ್ಯಕ. ಪಿಜ್ಜಾ, ಬರ್ಗರ್ ನಂತಹ ಜಂಕ್‌ಫುಡ್ ನಿಂದ ಚಿಕ್ಕ ವಯಸ್ಸಿನಲ್ಲೇ ಬರಬಾರದ ಖಾಯಿಲೆಗಳು ಬರುತ್ತಿವೆ. ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಆಹಾರ ಪದ್ದತಿಯೂ ಬದಲಾಗಿರುವುದು ದುರಂತ.

ದೇಶಿಯ ಆಹಾರ ಪದ್ದತಿಯಲ್ಲಿ ರೊಟ್ಟಿ, ಚಪಾತಿ, ಕಾಳುಗಳು, ತರಕಾರಿ, ಮೊಸರು, ಹಣ್ಣುಗಳನ್ನು ಸೇವಿಸಿದರೆ ಖಾಯಿಲೆಗಳು ಬರುವುದಿಲ್ಲ. ಒಂದು ವೇಳೆ ಬಂದರೂ ನಾವು ನಿತ್ಯ ಮಾಡುವ ಯೋಗ, ಸೂರ್ಯ ನಮಸ್ಕಾರಗಳು, ಪ್ರಾಣಾಯಾಮಗಳು ನಮಗೆ ರೋಗ ಬರದಂತೆ ಮಾಡುತ್ತವೆ.ವಿದ್ಯಾರ್ಥಿಗಳು ಈಗಿನಿಂದಲೇ ಯೋಗಭ್ಯಾಸವನ್ನು ರೂಢಿಸಿಕೊಂಡರೆ ನಿಮ್ಮ ಆರೋಗ್ಯದ ಜೊತೆ ಜ್ಞಾಪಕ ಶಕ್ತಿಯು ವೃದ್ಧಿಸುವುದಲ್ಲದೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಹೇಳಿದರು.

ಯೋಗ ಶಿಕ್ಷಕ ವೀರಣ್ಣ ಯಾರಿ ಮಾತನಾಡಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಯೋಗದ ಮೂಲಕ ಆರೋಗ್ಯದ ಅರಿವು ಮೂಡಿಸುವ ಅಗತ್ಯವಿದೆ. ಅನೇಕ ದುಶ್ಚಟಗಳಿಂದ ವಿದ್ಯಾರ್ಥಿಗಳು, ಯುವಕರು ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ದಯವಿಟ್ಟು ನಿಮ್ಮ ಮುಂದಿನ ಉತ್ತಮ ಆರೋಗ್ಯಯುತ ಬದುಕಿಗಾಗಿ ಯೋಗ ಮಾಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಂಚೂರು ಸವಿತಾ ಪೀಠದ ಶ್ರೀದರಾನಂದ ಸರಸ್ವತಿ ಸ್ವಾಮಿಗಳು,ಯೋಗ ಶಿಕ್ಷಕ ಮೋಹನ ಗಂಟಲಿ,ಶಿಕ್ಷಕ ಸಿದ್ಧಲಿಂಗ ಬಾಳಿ,ಶಿವಕುಮಾರ ಸರಡಗಿ, ಭೀಮಾಶಂಕರ ಬಮ್ಮನಳ್ಳಿ, ಸುಗುಣಾ ಕೋಳ್ಕೂರ, ಭುವನೇಶ್ವರಿ,ರಾಧಾ ರಾಠೋಡ, ಮಂಜುಳಾ ಪಾಟೀಲ, ವಿಜಯಲಕ್ಷ್ಮಿ ಬಮ್ಮನಳ್ಳಿ, ಇದ್ದರು.

ಸೋಮವಾರ, ಜನವರಿ 24, 2022

ಮಗನ ಸಾಧನೆಗೆ ತಂದೆ-ತಾಯಿ ಮೆಚ್ಚುಗೆ.

 

ಚಿತ್ತಾಪುರ: ಇತ್ತೀಚಿಗೆ ಕರ್ನಾಟಕ ಸರ್ಕಾರ ನೇಮಕ ಮಾಡಿಕೊಂಡ ಪಿಎಸ್ಐ ನೇಮಕಾತಿಯಲ್ಲಿ ಶಶಿಧರ್ 44ನೇ ರ್ಯಾಂಕ್ ಪಡೆದು ನೇಮಕವಾಗಿದ್ದು ಮಗನ ಸಾಧನೆ ಕಂಡು ತಂದೆ-ತಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ತಾಲೂಕಿನ ದಿಗ್ಗಾಂವ್ ಗ್ರಾಮದ ಸರ್ಕಾರಿ ಶಿಕ್ಷಕರಾದ ದೇವಿಂದ್ರಪ್ಪ ಶಹಾಬಾದಕರ್ ತಾಯಿ ಕವಿತಾ ಎಂಬುವರ ಮಗ ಶಶಿಧರ್ ಎನ್ನುವರು ತಾಲೂಕಿನ ಶಿಶು ವಿಹಾರ ಪ್ರಾಥಮಿಕ ಮತ್ತು ಬೆಂಥನಿ ಪ್ರೌಢಶಾಲೆ 1ನೇ ರಿಂದ 10ನೇ ತರಗತಿವರಿಗೆ ಓದಿ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಜಿಲ್ಲೆಯ ಶ್ರೀಗುರು ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಓದಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ, ನಂತರ ಬಿಸಿಎ ಪದವಿಯನ್ನು ಶರಣಬಸವೇಶ್ವರ ಪದವಿ ಕಾಲೇಜಿನಲ್ಲಿ ಮುಗಿಸಿ ಅಲ್ಲಿಯೂ ಸಹ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಮುಂದಿನ ಓದನ್ನು ನಿಲ್ಲಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಚಿತ್ತಹರಿಸಿ. ದಾರವಾಡ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಸೆಂಟರ್ ಒಂದಕ್ಕೆ ಸೇರಿ ಸತತವಾಗಿ ಮೂರು ವರ್ಷಗಳಿಂದ ಕೋಚಿಂಗ್ ಪಡೆದು ಪರಿಶ್ರಮದಿಂದ ಮೊದಲ ಹಂತದ ಪಿಎಸ್ಐ ನೇಮಕಾತಿಯಲ್ಲಿ ಸ್ವಲ್ಪದರಲ್ಲಿಯೇ ವಿಫಲರಾಗಿದ್ದರು. 

 ಸೋಲೆ ಗೆಲುವಿನ ಮೆಟ್ಟಲು ಎಂದು ತಿಳಿದು ಕೋಚಿಂಗ್ ಅನ್ನು ಮುಂದುವರೆಸಿ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ನಿಂತು ಪಿಎಸ್ಐ ಹುದ್ದೆ ಕನಸು ನನಸು ಮಾಡಿಕೊಂಡು ಯಶಸ್ವಿಯಾಗಿದ್ದಾರೆ.

 ಮಗನ ತಂದೆ ದೇವಿಂದ್ರಪ್ಪ ಶಹಾಬಾದಕರ್ ಅವರು ಸಂಜೆವಾಣಿ ಪತ್ರಿಕಾ ವರದಿಗಾರರ ಜೊತೆ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ನನ್ನ ಮಗ 44ನೇ ರ್ಯಾಂಕ್ ನೊಂದಿಗೆ ನೇಮಕಾತಿ ಹೊಂದಿದ್ದು ವರದಾನವಾಗಿದೆ. 23ನೇ ವಯಸ್ಸಿಗೆ ಮಗನ ಸಾಧನೆಗೆ ಗುರು-ಹಿರಿಯರು ಕುಟುಂಬಸ್ಥರು,  ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳು ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ಭಾನುವಾರ, ಜನವರಿ 23, 2022

ನಾಮಫಲಕ ವಿಲ್ಲದ ಅಬಕಾರಿ ಇಲಾಖೆ.

ಚಿತ್ತಾಪುರ: ಅಬಕಾರಿ ಇಲಾಖೆಗೆ ನಾಮಫಲಕ ವಿಲ್ಲದ ಕಾರಣ ಜನರ ಗೊಂದಲಕ್ಕೆ ಕಾರಣವಾಗಿದೆ.

 ಪಟ್ಟಣದ ಬಸ್ ಘಟಕದ ಹತ್ತಿರ ಬಿಲ್ಡಿಂಗ್ ಒಂದರಲ್ಲಿ ಅಬಕಾರಿ ಇಲಾಖೆ ಇದ್ದು ಈ ಮುಂಚೆ ಚಿಕ್ಕದೊಂದು ಹಳೆಯ ನಾಮಫಲಕ ವಿತ್ತು ಆದರೆ ಈಗ ಆ ನಾಮಫಲಕ ಕೂಡ ಇಲ್ಲ ಆದ್ದರಿಂದ ಅಬಕಾರಿ ಇಲಾಖೆಗೆ ಬರುವ ಜನರಿಗೆ ಅಬಕಾರಿ ಇಲಾಖೆ ಕಚೇರಿ ಯಾವುದು ಎಂದು ರಸ್ತೆಯಲ್ಲಿ ನಿಂತು ಕೇಳುವ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಿದ್ದಾರೆ.

 ಈಗಲಾದರೂ ಅಬಕಾರಿ ಇಲಾಖೆಯವರು ಎಚ್ಚೆತ್ತುಕೊಂಡು ನಾಮಫಲಕ ಹಾಕುವಲ್ಲಿ ಮುಂದಾಗುತ್ತಾರೆ ಕಾದುನೋಡಬೇಕಾಗಿದೆ

ಗ್ರಾಪಂ ಅಧ್ಯಕ್ಷನಿಗೆ ಹೊಡೆದ ಅಬಕಾರಿ ಸಬ್ ಇನ್ಸ್ಪೆಕ್ಟರ್.

ಚಿತ್ತಾಪುರ: ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಸಂಬಂಧಿಸಿದಂತೆ ತಾಲೂಕಿನ ಬೀಮನಹಳ್ಳಿ ಗ್ರಾಮದ ಮಹಿಳೆಯೊಬ್ಬಳನ್ನು ವಶಕ್ಕೆ ಪಡೆಯಲು ಹೋಗಿದ್ದ ಚಿಂಚೋಳಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಜಟ್ಟೆಪ್ಪ ಎನ್ನುವರು ಭೀಮನಹಳ್ಳಿ ಗ್ರಾಪಂ, ಅಧ್ಯಕ್ಷ ಅಶೋಕ್ ಕಾಸಲ್ ಎಂಬುವರಿಗೆ ಹೊಡೆದಾಗ ಗ್ರಾಮಸ್ಥರು ಆಕ್ರೋಶ ಗೊಂಡಾಗ ಅಬಕಾರಿ ಇನ್ಸ್ಪೆಕ್ಟರ್ ಓಡಿಹೋದ ಘಟನೆ  ಶನಿವಾರ ನಡೆದಿದೆ.

ಚಿಂಚೋಳಿ ಅಬಕಾರಿಗೂ ನಮ್ಮ ಗ್ರಾಮಕ್ಕೂ ಏನು ಸಂಬಂಧ ಚಿತ್ತಾಪುರ ಅಬಕಾರಿ ಇಲಾಖೆಯವರು ಬಂದು ಕೇಳಲಿ. ಗ್ರಾಪಂ ಅಧ್ಯಕ್ಷರಿಗೆ ಅವರು ಯಾಕೆ ಹೊಡೆಯಬೇಕು ಎಂದು ಪ್ರಶ್ನಿಸಿದರು ಗ್ರಾಮಸ್ಥರ ಆಕ್ರೋಶಗೊಂಡ ಪರಿಣಾಮ ಚಿಂಚೋಳಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಓಡಿಹೋಗಿದರು ಉಳಿದ ಅಬಕಾರಿ ಸಿಬ್ಬಂದಿ ವರ್ಗದವರಿಗೆ ಹಾಗೂ ಅವರ ವಾಹನಗಳನ್ನು ಗ್ರಾಮದಿಂದ ಹೋಗದಂತೆ  ತಡೆದು ಮುಳ್ಳು ಕಂಟಿ ಹಚ್ಚಿ ವಾಹನಗಳಿಗೆ ಗಾಳಿ ಬಿಟ್ಟು ತಡೆದು ಗ್ರಾಮ ಪಂಚಾಯಿತಿಗೆ ಕರೆಸಿಕೊಂಡು ಗ್ರಾಮಸ್ಥರು ಓಡಿಹೋದ ಅಬಕಾರಿ ಸಬ್ ಇನ್ಸ್ಪೆಕ್ಟರ್ ಬರಬೇಕೆಂದು ಪಟ್ಟು ಹಿಡಿದರು ಕೆಲವೊತ್ತು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಚಿತ್ತಾಪುರ ಸಿಪಿಐ ಪ್ರಕಾಶ್ ಯಾತನೂರ, ಹಾಗೂ ಅಬಕಾರಿ ಇಲಾಖೆಯ ಉಪ ಅಧೀಕ್ಷಕರು ವಿಜಯಕುಮಾರ್ ರಾಂಪುರೆ, ಅಬಕಾರಿ ಸಿಪಿಐ ಶರಣಗೌಡ ಬಿರಾದರ್, ಚಿತ್ತಾಪುರ ಅಬಕಾರಿ ಪಿಎಸ್ಐ ರಮೇಶ್ ಬಿರಾದರ್, ಆಗಮಿಸಿ ಪಂಚಾಯತ್ ಕಚೇರಿಯಲ್ಲಿ  ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಎಮ್ಮೆನೂರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ್ ಸುಣಗಾರ್,   ಹಾಗೂ ಶಿವಾಜಿ ಭೂವಿ, ಬಸವರಾಜ್ ಹಾದಿಮನಿ, ಮೌನೇಶ್ ಹೊಸಳ್ಳಿ, ರಾಜಣ್ಣ ಕಂಬಾರ್, ಗ್ರಾಮ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಚಿಂಚೋಳಿ ಸಬ್ ಇನ್ಸ್ಪೆಕ್ಟರ್ ಜಟ್ಟಪ್ಪ ಅವರಿಗೆ ಫೋನ್ ಮಾಡಿ ಭೀಮನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕಾಸಲ್ ಅವರಿಗೆ ಫೋನಿನಲ್ಲಿ ಕ್ಷಮೆ ಯಾಚಿಸಿ ಸಂಧಾನ ಮಾಡಿಸಿದರು.

 ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದ  ಮಹಿಳೆಯನ್ನು ವಶಕ್ಕೆ ಪಡೆಯಲು ಅಬಕಾರಿ ಇಲಾಖೆ ಯವರು ಬಂದಿದ್ದರೆ ಮಹಿಳಾ ಅಬಕಾರಿ ಅಧಿಕಾರಿಯವರನ್ನು ಕರೆತಂದು ವಿಚಾರಣೆ ನಡೆಸಿ ವಶಕ್ಕೆ ಪಡೆಯಬೇಕಾಗಿತ್ತು ಅಥವಾ ಗ್ರಾಮ್ ಪಂಚಾಯತ್ ಪಿಡಿಓ, ಅಧ್ಯಕ್ಷರ ಮಾಹಿತಿ ಪಡೆಯಬೇಕಿತ್ತು ಆದರೆ ಏಕಾಏಕಿ ಗ್ರಾಮದ ಮಹಿಳೆಯ ಮನೆಗೆ ನುಗ್ಗಿ ಕಳ್ಳಬಟ್ಟಿ ಸಾರಾಯಿ ತುಂಬಿದ ಕೊಡಗಳನ್ನು ಚೆಲ್ಲಿ ಗಾಡಿಯಲ್ಲಿ ಕೂಡು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಇದು ಅವರು ಮಾಡಿದ ದೌರ್ಜನ್ಯ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

 ಈ ಗಲಾಟೆಗೆ ಸಂಬಂಧಿಸಿದಂತೆ ಅಬಕಾರಿ ಅಧಿಕಾರಿಗಳಿಗೆ ಕೇಳಿದರೆ ಮಾಹಿತಿ ನೀಡಲಿಲ್ಲ ನಮಗೆ ಮಾಹಿತಿ ನೀಡುವ ಹಕ್ಕು ಇಲ್ಲ ಜಿಲ್ಲಾ ಅಬಕಾರಿ ಅಧಿಕಾರಿಗಳ ಹತ್ತಿರ ಮಾಹಿತಿ ಪಡೆಯಿರಿ ಎಂದು ಹರುಕು ಉತ್ತರ ನೀಡಿದ್ದಾರೆ.

 ಇಂತಹ ಘಟನೆಗೆ ಸಂಬಂಧಿಸಿದಂತೆ ಒಂದು ಹೇಳಿಕೆ ನೀಡದ ಅಧಿಕಾರಿಗಳು ಇನ್ನು ಕರ್ತವ್ಯ ಹೇಗೆ ನಿರ್ವಹಿಸುತ್ತಾರೆ ಜನಸಾಮಾನ್ಯರ ಜೊತೆ ಹೀಗೆ ವರ್ತಿಸುತ್ತಾರೆ ಎಂಬುದೇ ಒಂದು ಸವಾಲಾಗಿದೆ.

-ಅಶೋಕ್ ಕಾಸಲ್ ಗ್ರಾಪಂ, ಅಧ್ಯಕ್ಷರು ಭೀಮನಹಳ್ಳಿ

ಮಂಗಳವಾರ, ಜನವರಿ 18, 2022

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಜೆ,ಟಿವಿ ಕನ್ನಡ ಸುದ್ದಿ(ಜ,18)

ಚಿತ್ತಾಪುರ: ತಾಲ್ಲೂಕಿನಿಂದ ರಾವೂರ ಗ್ರಾಮಕ್ಕೆ ಹೋಗುವ ನಾಗಾವಿ ನಾಡಿಗೆ ಸ್ವಾಗತ ಕೋರುವ ಕಮನ ಹತ್ತಿರ ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಾಯಂಕಾಲ ವೇಳೆ ಸಂಭವಿಸಿದೆ.

  ಪಾಳೆದಾರ್ ಹೊಲದಲ್ಲಿ ತೊಗರಿ ಹೊರಿಕಟ್ಟಲು ಹೋಗಿದ್ದ ಕೂಲಿಕಾರರು ಕೆಲಸ ಮುಗಿಸಿಕೊಂಡು ಎತ್ತಿನ ಗಾಡಿಯಲ್ಲಿ ಚಿತ್ತಾಪುರ ಕಡೆ ಬರುವಾಗ ಹಿಂಬದಿಯಿಂದ ಪಿಕಪ್ ಗಾಡಿ ಡಿಕ್ಕಿ ಹೊಡೆದ ಪರಿಣಾಮ ಎತ್ತಿನ ಗಾಡಿಯು ರಸ್ತೆಯ ಪಕ್ಕಕ್ಕೆ ಉರುಳಿಬಿದ್ದ ರಿಂದ  8 ಜನರು ಗಾಯಗೊಂಡಿದ್ದಾರೆ.

  ಪಿಕಪ್ ಗಾಡಿಯ ಡ್ರೈವರ್ ಪರಾರಿಯಾಗಿದ್ದಾನೆ.ಸ್ಥಳೀಯರು ಕೂಡಲೇ ಗಾಯಗೊಂಡ ಜನರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

  ಎತ್ತಿನ ಬಂಡಿ ಓಡಿಸುತ್ತಿದ್ದ ಬಸವರಾಜ್ ಡೆಂಗಿ, ಬಿಸಾಬಿ ಮುಜಾರ್, ಲಲಿತಾ ಬೀರಪ್ಪ ಪೂಜಾರಿ, ಅಬ್ದುಲ್ಲಾಬಿ ಗುಡಸಾಬ, ರವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

  ರಜಿಯಾಬಿ ಇಸ್ಮಾಯಿಲ್, ಕುತೀಜಾ ಬೇಗಂ ಮಹೇಬೂಬ ಸಾಬ್, ಶಕೀಲಾ ಸಲಿಂಮೀಯಾ, ಮೀನಾಕ್ಷಿ ಮಲ್ಲಿಕಾರ್ಜುನ ತೆಂಗಳೇರ ಎಂಬ ಕೂಲಿಕಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...