ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಜೆ,ಟಿವಿ ಕನ್ನಡ ಸುದ್ದಿ(ಜ,18)

ಚಿತ್ತಾಪುರ: ತಾಲ್ಲೂಕಿನಿಂದ ರಾವೂರ ಗ್ರಾಮಕ್ಕೆ ಹೋಗುವ ನಾಗಾವಿ ನಾಡಿಗೆ ಸ್ವಾಗತ ಕೋರುವ ಕಮನ ಹತ್ತಿರ ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಾಯಂಕಾಲ ವೇಳೆ ಸಂಭವಿಸಿದೆ.

  ಪಾಳೆದಾರ್ ಹೊಲದಲ್ಲಿ ತೊಗರಿ ಹೊರಿಕಟ್ಟಲು ಹೋಗಿದ್ದ ಕೂಲಿಕಾರರು ಕೆಲಸ ಮುಗಿಸಿಕೊಂಡು ಎತ್ತಿನ ಗಾಡಿಯಲ್ಲಿ ಚಿತ್ತಾಪುರ ಕಡೆ ಬರುವಾಗ ಹಿಂಬದಿಯಿಂದ ಪಿಕಪ್ ಗಾಡಿ ಡಿಕ್ಕಿ ಹೊಡೆದ ಪರಿಣಾಮ ಎತ್ತಿನ ಗಾಡಿಯು ರಸ್ತೆಯ ಪಕ್ಕಕ್ಕೆ ಉರುಳಿಬಿದ್ದ ರಿಂದ  8 ಜನರು ಗಾಯಗೊಂಡಿದ್ದಾರೆ.

  ಪಿಕಪ್ ಗಾಡಿಯ ಡ್ರೈವರ್ ಪರಾರಿಯಾಗಿದ್ದಾನೆ.ಸ್ಥಳೀಯರು ಕೂಡಲೇ ಗಾಯಗೊಂಡ ಜನರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

  ಎತ್ತಿನ ಬಂಡಿ ಓಡಿಸುತ್ತಿದ್ದ ಬಸವರಾಜ್ ಡೆಂಗಿ, ಬಿಸಾಬಿ ಮುಜಾರ್, ಲಲಿತಾ ಬೀರಪ್ಪ ಪೂಜಾರಿ, ಅಬ್ದುಲ್ಲಾಬಿ ಗುಡಸಾಬ, ರವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

  ರಜಿಯಾಬಿ ಇಸ್ಮಾಯಿಲ್, ಕುತೀಜಾ ಬೇಗಂ ಮಹೇಬೂಬ ಸಾಬ್, ಶಕೀಲಾ ಸಲಿಂಮೀಯಾ, ಮೀನಾಕ್ಷಿ ಮಲ್ಲಿಕಾರ್ಜುನ ತೆಂಗಳೇರ ಎಂಬ ಕೂಲಿಕಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.