ಪೋಸ್ಟ್‌ಗಳು

ಜನವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಂದು ಮಡಿವಾಳ ಮಾಚಿದೇವರ ಜಯಂತಿ.

ಇಮೇಜ್
ಚಿತ್ತಾಪುರ: ರಾಜ್ಯಾದ್ಯಂತ ಇಂದು ಫೆಬ್ರವರಿ ೧,ರಂದು ಮಡಿವಾಳ ಮಾಚಿದೇವರ ಜಯಂತಿಯನ್ನು  ಆಚರಿಸಲಾಗುತ್ತಿದೆ. ಪಟ್ಟಣದ ತಹಸೀಲ್ ಕಾರ್ಯಾಲಯದಲ್ಲಿ ನಡೆಯಲಿರುವ  ಮಡಿವಾಳ ಮಾಚಿದೇವರ ಜಯಂತಿಗೆ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮಡಿವಾಳ ಸಮಾಜದ ಮುಖಂಡ ಮಲ್ಲಿನಾಥ ಮಡಿವಾಳ ವಿನಂತಿಕೊಂಡಿದ್ದಾರೆ. ವಚನ ಸಾಹಿತ್ಯ ರಕ್ಷಣೆಯ ದಂಡನಾಯಕರೆಂದೇ ಮಾಚಿದೇವರನ್ನು ಕರೆಯುತ್ತಾರೆ. ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಮಾಚಿದೇವರು ಹೊತ್ತ ಜವಾಬ್ದಾರಿ ಅನುಪಮವಾದದ್ದು. ಶರಣ ಸಮೂಹವನ್ನು ರಕ್ಷಿಸಿ, ವಚನ ಸಾಹಿತ್ಯವನ್ನು ಉಳವಿಗೆ ತಲುಪಿಸಿದ ಮಹಾನ್ ದಂಡನಾಯಕನೇ ಮಾಚಿದೇವ. ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜತೆಗೆ ಜ್ಞಾನ ವಿಸ್ತರಣೆಗೆ ಅವರು ನೀಡಿದ ಕೊಡುಗೆ ಮಹತ್ತರವಾದುದು. ಹೀಗಾಗಿ ಮುಂಬರುವ ದಿನಗಳಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಮಡಿವಾಳ ಮಾಚಿದೇವರ ಭವನ ನಿರ್ಮಾಣವಾಗಲಿ ಅವರ ಆದರ್ಶ ಪತ್ರಿಯೊಬ್ಬರಿಗೂ ಮುಟ್ಟುವ ಕೆಲಸ ಆಗಲಿ ಎಂಬುದು ನನ್ನ ಆಸೆ ನುಡಿದಿದ್ದಾರೆ.

ಅಸುರರು ಸಿನಿಮಾದ ಪೋಸ್ಟರ್ ಬಿಡುಗಡೆ.

ಇಮೇಜ್
ರಾಯಚೂರು:   ಮಕರ ಸಂಕ್ರಾಂತಿ ಹಬ್ಬದಂದು ಅಸುರರು ಸಿನಿಮಾದ ಪೋಸ್ಟರ್ ಅನ್ನು ಹಿರಿಯ ಕಲಾವಿದರಾದಂತಹ ಎಂ ಕೆ ಸುಂದರ್ ರಾಜ್ ಹಾಗೂ ಅವರ ಧರ್ಮಪತ್ನಿಯವರ ಸಾರಥ್ಯದಲ್ಲಿ ಬಿಡುಗಡೆ ಮಾಡಲಾಯಿತು. ವಿಶೇಷ ಹಾಗೂ ವಿಸ್ಮಯ ಕಥಹಂದರವನ್ನು ಹೊತ್ತು ತರುತ್ತಿರುವ ಅಸುರರು ಸಿನಿಮಾ  ಅಸುರರು ಸಿನಿಮಾ ಜನರಲ್ಲಿ ಕುತೂಹಲ ಮೂಡಿಸುವಂತಹ ನೈಜನತೆಯ ವಿಶೇಷತೆಯ ಕಥಾಂದರವನ್ನು ಹೊಂದಿದೆ ಎನ್ನಲಾಗಿದೆ  ಈ ಸಿನಿಮಾ  ಪ್ರತಿ ಮನುಷ್ಯನಲ್ಲೂ ಇರುವಂತಹ ಸುರ ಅಸುರರ ಪ್ರತಿರೂಪವಾಗಿದೆ  ಎನ್ನಲಾಗುತ್ತಿದೆ. ಸಿನಿಮಾ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ ಹಿರಿಯ ಕಲಾವಿದರಾದ ಎಂಕೆ ಸುಂದರ್ ರಾಜ್ ರವರು ಮಾತನಾಡಿ ವಿಶೇಷ ಕಥ ಹಂದರವನ್ನು ಹೊತ್ತು ತರುತ್ತಿರುವ ಅಸುರರು ಸಿನಿಮಾ ತಂಡಕ್ಕೆ ಅರಸಿ ಹಾರೈಸಿದ್ದಾರೆ ಸಿನಿ ಪ್ರೇಕ್ಷಕನ ಮನಗೆಲ್ಲಲು ತಯಾರಾಗಿರುವ ಅಸುರರು ಸಿನಿಮಾ ಅದ್ಭುತ ಯಶಸ್ಸು ಕಾಣುವುದಾಗಿ ಹಾಗೂ ಹೊಸ ಪ್ರತಿಭೆಗಳು ಮತ್ತಷ್ಟು ಬೆಳಕಿಗೆ ಬಂದು ಚಿತ್ರರಂಗದ ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ  ಬೆಳೆಸಲಿ ಮತ್ತು ಅಸುರರು ಸಿನಿಮಾ ಯಶಸ್ವಿ ಪ್ರದರ್ಶನಗೊಂಡು ಜಯಭೇರಿ ಬಾರಿಸಲಿ ಎಂದರು. ಈ ಸಂದರ್ಭದಲ್ಲಿ  ನಿರ್ದೇಶಕರಾದ ರಾಜ್ ಬಹದ್ದೂರ್, ನಿರ್ಮಾಪಕರಾದ ರಾಜ್ ಬಹದ್ದೂರ್ ಫಿಲ್ಮ್ ಫ್ಯಾಕ್ಟರಿ, ಸಂಕಲನ ಸುರೇಶ್ ಅರಸ್,  ಛಾಯಾಗ್ರಹಣ ನವೀನ್ ಸೂರ್ಯ, ಸಂಗೀತ ನಿರ್ದೇಶಕರಾದ ಸುಭಾಷ್,   ...

ತಡೆದು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ.

ಚಿತ್ತಾಪುರ: ಶಾಲಾ-ಕಾಲೇಜಿಗೆ ತೆರಳುವ ವೇಳೆ ಬಸ್ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಬಸ್  ತಡೆದು ದಿಢೀರ್ ಪ್ರತಿಭಟನೆ ನಡೆಸಿದರು. ಚಿತ್ತಾಪುರ ದಿಂದ ಕಲಬುರ್ಗಿ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ಸಿನ ಸೌಕರ್ಯ, ಸರಿಯಾದ ಸಮಯಕ್ಕೆ ಬಸ್ ಬರದೇ ಇರುವುದು. ಖಂಡಿಸಿ ಬಸ್ ಸೌಕರ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಬಸ್ ಸಂಚಾರ ನಿಯಂತ್ರಣಾಧಿಕಾರಿ ಅವರನ್ನು ಸಂಪರ್ಕಿಸಿದಾಗ ಇಲ್ಲಸಲ್ಲದ ಕಾರಣ ನೀಡಿದರು. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಚಿತ್ತಾಪುರ ದಿಂದ ದಂಡೋತಿ ಮಾರ್ಗವಾಗಿ ಕಲಬುರ್ಗಿ ಹೋಗುವ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಹೆಚ್ಚನೆಚ್ಚು ಬಸ್ಸುಗಳು ಚಿತ್ತಾಪುರ ದಿಂದ ರಾವೂರ ಮಾರ್ಗವಾಗಿ ಕಲಬುರ್ಗಿ ಹೋಗುತ್ತವೆ ಆದ್ರೆ ಆ ಬಸ್ಸುಗಳಿಗೆ ವಿದ್ಯಾರ್ಥಿಗಳು ಹತ್ತಿದರೆ ಮಾರ್ಗ ಮಧ್ಯದಲ್ಲಿ ಬಸ್ ಇಂದ ವಿದ್ಯಾರ್ಥಿಗಳನ್ನು ಇಳಿಸಲಾಗುತ್ತಿದೆ. ಕಾರಣ ಕೇಳಿದರೆ ನಿಮ್ಮ ಪಾಸ್ ದಂಡೋತಿ ಮಾರ್ಗವಾಗಿದೆ ರಾವೂರ ಮಾರ್ಗವಾಗಿ ಪಾಸ್ ನಡೆಯುವುದಿಲ್ಲ ಎಂದು ಹೇಳುತ್ತಾರೆ. ಇಂತಹ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಬೇಸತ್ತು. ಬಸ್ ತಡೆದು ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಸ್ ಘಟಕ ಸಿಬ್ಬಂದಿ ವರ್ಗ, ಪೊಲೀಸ್ ಸಿಬ್ಬಂದಿಗಳು ವಿದ್ಯಾರ್ಥಿಗಳ ಮನವೊಲಿಸಿ ಬಸ್ ಘಟಕ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ರಾವೂರ ಮಾರ್ಗವಾಗಿ...

ಕೆಳಗೆ ಬಿದ್ದ ಬೋರ್ಡ್: ಕೃಷಿ ಇಲಾಖೆ ನಿರ್ಲಕ್ಷ್ಯ.

ಇಮೇಜ್
- ಜಗದೇವ ಎಸ್ ಕುಂಬಾರ  ಚಿತ್ತಾಪುರ : ಪಟ್ಟಣದ ಕೃಷಿ ಇಲಾಖೆಗೆ ಹೋಗುವ ರಸ್ತೆಯ ಬದಿಯಲ್ಲಿ ರೈತ ಸಂಪರ್ಕ ಕೇಂದ್ರದ ಬೋರ್ಡ್ ಹಾಕಲಾಗಿತ್ತು ಒಂದು ವರ್ಷದಿಂದ ಈ ಬೋರ್ಡ್ ಕೆಳಗೆ ಬಿದ್ದು ಧೂಳ್ ಹಿಡಿದಿದೆ ಈ ಬೋರ್ಡ್ ಕಣ್ಣಿಗೆ ಕಂಡರೂ ಸಹ ಅದನ್ನು ದುರಸ್ತಿ ಮಾಡದೆ ಕೃಷಿ ಇಲಾಖೆ ಅಧಿಕಾರಿಗಳು ನಿರ್ಲಕ್ಷತನ ವಹಿಸುತ್ತಿದ್ದಾರೆ ಎಂಬುದು ಈ ದೃಶ್ಯ ಸಾಕ್ಷಿಯಾಗಿದೆ. ತಾಲೂಕಿನ ಸುತ್ತಮುತ್ತಲಿನ ರೈತರು ಕೃಷಿ ಇಲಾಖೆಗೆ ಬರಬೇಕಾದರೆ ಈ ಮುಂಚೆ ಈ ಬೋರ್ಡ್  ನೋಡಿ ಇಲಾಖೆಗೆ ಹೋಗುತ್ತಿದ್ದರು ಈಗ ಸಾಧ್ಯ ಒಂದು ವರ್ಷದಿಂದ ಈ ಬೋರ್ಡ್ ಇಲ್ಲದರಿಂದ ರೈತರಿಗೆ ಇಲಾಖೆಗೆ ಹೋಗಲು ತೊಂದರೆಯಾಗುತ್ತಿದೆ. ಕೃಷಿ ಇಲಾಖೆ ಎಲ್ಲಿ ಬರುತ್ತದೆ ಎಂದು ಸಾರ್ವಜನಿಕರಿಗೆ ಕೇಳಿ ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಸಾಕಷ್ಟು ಜನ ರೈತರು ಹೇಳುತ್ತಿದ್ದಾರೆ. ಕೃಷಿ ಇಲಾಖೆಗೆ ಅಧಿಕಾರಿಗಳು ಇದೇ ರಸ್ತೆಯಿಂದ ಹೋಗುತ್ತಾರೆ, ಬರುತ್ತಾರೆ, ಹಾಗೂ ಇಲಾಖೆ ಸಿಬ್ಬಂದಿ ವರ್ಗ ವರ್ಗ ಸಹ ಹೋಗಿ ಬರುತ್ತಾರೆ ಅವರಿಗೆ ಈ ಬೋರ್ಡ್ ಕಾಣುತ್ತಿಲ್ಲವೇ? ಎಂಬುವುದು ಸ್ಥಳೀಯರ ಪ್ರಶ್ನೆಯಾಗಿದೆ. ಈ ಒಂದು ಸಣ್ಣ ಕೆಲಸ ಅವರಿಂದ ಮಾಡಲು ಆಗುತ್ತಿಲ್ಲ ಎಂದರೆ ಇನ್ನು ಕಚೇರಿಯಲ್ಲಿನ ಪರಿಸ್ಥಿತಿ ಏನು ಎಂಬುದು ಇನ್ನೊಂದು ಕಡೆ ರೈತರು ಮಾತಾಡಿಕೊಳ್ಳುತ್ತಿದ್ದಾರೆ. ಈ  ಸುದ್ದಿಯನ್ನಾದರೂ ನೋಡಿ ಕೃಷಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬೋರ್ಡ್ ಎತ್ತಿ ಇಟ್ಟು  ದುರಸ್ತಿ ಮಾ...