ಶನಿವಾರ, ಜನವರಿ 20, 2024

ತಡೆದು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ.




ಚಿತ್ತಾಪುರ: ಶಾಲಾ-ಕಾಲೇಜಿಗೆ ತೆರಳುವ ವೇಳೆ ಬಸ್ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಬಸ್  ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಚಿತ್ತಾಪುರ ದಿಂದ ಕಲಬುರ್ಗಿ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ಸಿನ ಸೌಕರ್ಯ, ಸರಿಯಾದ ಸಮಯಕ್ಕೆ ಬಸ್ ಬರದೇ ಇರುವುದು. ಖಂಡಿಸಿ ಬಸ್ ಸೌಕರ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಬಸ್ ಸಂಚಾರ ನಿಯಂತ್ರಣಾಧಿಕಾರಿ ಅವರನ್ನು ಸಂಪರ್ಕಿಸಿದಾಗ ಇಲ್ಲಸಲ್ಲದ ಕಾರಣ ನೀಡಿದರು. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಚಿತ್ತಾಪುರ ದಿಂದ ದಂಡೋತಿ ಮಾರ್ಗವಾಗಿ ಕಲಬುರ್ಗಿ ಹೋಗುವ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಹೆಚ್ಚನೆಚ್ಚು ಬಸ್ಸುಗಳು ಚಿತ್ತಾಪುರ ದಿಂದ ರಾವೂರ ಮಾರ್ಗವಾಗಿ ಕಲಬುರ್ಗಿ ಹೋಗುತ್ತವೆ ಆದ್ರೆ ಆ ಬಸ್ಸುಗಳಿಗೆ ವಿದ್ಯಾರ್ಥಿಗಳು ಹತ್ತಿದರೆ ಮಾರ್ಗ ಮಧ್ಯದಲ್ಲಿ ಬಸ್ ಇಂದ ವಿದ್ಯಾರ್ಥಿಗಳನ್ನು ಇಳಿಸಲಾಗುತ್ತಿದೆ. ಕಾರಣ ಕೇಳಿದರೆ ನಿಮ್ಮ ಪಾಸ್ ದಂಡೋತಿ ಮಾರ್ಗವಾಗಿದೆ ರಾವೂರ ಮಾರ್ಗವಾಗಿ ಪಾಸ್ ನಡೆಯುವುದಿಲ್ಲ ಎಂದು ಹೇಳುತ್ತಾರೆ.

ಇಂತಹ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಬೇಸತ್ತು. ಬಸ್ ತಡೆದು ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಸ್ ಘಟಕ ಸಿಬ್ಬಂದಿ ವರ್ಗ, ಪೊಲೀಸ್ ಸಿಬ್ಬಂದಿಗಳು ವಿದ್ಯಾರ್ಥಿಗಳ ಮನವೊಲಿಸಿ ಬಸ್ ಘಟಕ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ರಾವೂರ ಮಾರ್ಗವಾಗಿ ವಿಧ್ಯಾರ್ಥಿಗಳು ಹೋಗಲು ಅನುಕೂಲ ಮಾಡಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಿದರು. ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿ ಶಾಲಾ ಕಾಲೇಜುಗಳಿಗೆ ತೆರಳಿದ ಸಂದರ್ಭ ನಡೆಯಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...