ಬುಧವಾರ, ಡಿಸೆಂಬರ್ 8, 2021

ನಮ್ಮನ್ನು ರಕ್ಷಿಸುತ್ತಿದ್ದ ಹುಡೆ, ಅಗಸಿಗೆ ರಕ್ಷಣೆ ಇಲ್ಲದಂತಾಗಿದೆ.


ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್‌ ರಾಜ್ ಇಲಾಖೆಗಳ ನಿರ್ಲಕ್ಷತನ.


-ಜಗದೇವ ಎಸ್ ಕುಂಬಾರ

ವಾಡಿ: ಶತ್ರು ಸೈನಿಕರು ಒಳ ನುಗ್ಗುವುದನ್ನು ಹಾಗೂ ದಾಳಿಗೆ ಪ್ರತ್ಯುತ್ತರ ನೀಡುವ ಉದ್ದೇಶದಿಂದ ಗ್ರಾಮದ, ಜನರ ರಕ್ಷಣೆಗಾಗಿ ಗ್ರಾಮದಲ್ಲಿ ಹುಡೆ ಮತ್ತು ಊರ ಮುಂದೆ ಅಗಸಿನಿ ರ್ಮಿಸಲಾಗುತ್ತಿತ್ತು ಎಂದು ಇತಿಹಾಸ ಹೇಳುತ್ತಿದೆ ಆದರೆ ಅಂದು ನಮ್ಮನ್ನು ರಕ್ಷಿಸುತ್ತಿದ್ದ ಹುಡೆ, ಅಗಸಿಗೆ ರಕ್ಷಣೆ ಇಲ್ಲದಂತಾಗಿದೆ.

ಲಕ್ಷ್ಮಿಪುರವಾಡಿ ಈಗಿನ (ಗಾಂಧಿನಗರ) ಗ್ರಾಮದಲ್ಲಿ ಸುಮಾರು ವರ್ಷಗಳ ಹಳೆಯ ಹುಡೆ, ಅಗಸಿ ಇದ್ದು ಈಗ ಅವು ಅಳಿವಿನ ಅಂಚಿನಲ್ಲಿ ಇವೆ ಎಂದರೆ ಇದಕ್ಕೆಲ್ಲ ಕಾರಣ ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್‌ರಾಜ್ ಇಲಾಖೆಗಳ ನಿರ್ಲಕ್ಷ್ಯತನವೇ ಎಂಬುವುದು ತೋರುತ್ತಿದೆ.


ಈ ಭಾಗದಲ್ಲಿ ಶಾತವಾಹನರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಳಚೂರ್ಯರು, ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದರು. ರಾಷ್ಟ್ರಕೂಟರು ಈಗಿನ ಮಳಖೇಡ (ಮಾನ್ಯಖೇಟ) ತಮ್ಮ ರಾಜಧಾನಿಯನ್ನಾಗಿ ಸಿಕೊಂಡಿದ್ದ ಸಮಯದಲ್ಲಿ ತಾಲೂಕು ಕೇಂದ್ರ ಸೇಡಂನಲ್ಲಿ ರಾಣಿವಾಸ, ಸಮೀಪದ ನೀಲಹಳ್ಳಿಯಲ್ಲಿ ಖಜಾನೆಯು ಇತ್ತು. ಚಿತ್ತಾಪುರ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಟಂಕಣಶಾಲೆ ದಂಡೋತಿಯಲ್ಲಿ ಸೈನ್ಯದ ವಾಸಸ್ಥಳವಿತ್ತು. ಅಷ್ಟೇ ಅಲ್ಲದೆ ನಾಗವಿ ಎಲ್ಲಮ್ಮ ದೇವಾಲಯ ಹಾಗೂ ಹೊನಗುಂಟಾ ಚಂದ್ರಲಾ ಪರಮೇಶ್ವರಿ ದೇವಾಲಯ, ಮಹಬೂಬ್ ಸುಭಾನಿ ದರ್ಗಾ, ಚರ್ಚ್ ಗಳು ಸೇರಿದಂತೆ ಅನೇಕ ದೇವಾಲಯಗಳು ಒಳಗೊಂಡು ಶಕ್ತಿಪೀಠಗಳಾಗಿದ್ದವು.

ನಮ್ಮ ಭಾಗದ ಸಂಪತ್ತನ್ನು ಕೊಳ್ಳೆ ಹೊಡೆಯಬಾರದು ನಮ್ಮ ಮೇಲೆ ದಾಳಿ ಮಾಡಬಾರದು ಎಂಬ ಉದ್ದೇಶದಿಂದ ಹುಡೆ ನಿರ್ಮಿಸುತ್ತಿದ್ದರು

ಇವುಗಳ ಎತ್ತರ 60 ಅಡಿವೆರೆಗೆ ಇದ್ದು, ನಾಲ್ಕು ದಿಕ್ಕುಗಳಿಗೂ ಅಥವಾ ಊರಿಗೆ ಒಂದು ನಿರ್ಮಿಸಿ. ಆಳೆತ್ತರ ಬಿಟ್ಟು ಕೆಳಗೆ ಮಣ್ಣು ತುಂಬಿರುತ್ತಿದ್ದರು. ವೀಕ್ಷಿಸುವುದಕ್ಕಾಗಿ ಸುತ್ತ ನಾಲ್ಕೂ ಗೋಡೆಗಳಿಗೆ ಸಣ್ಣ ಕಿಂಡಿಗಳನ್ನು ಬಿಟ್ಟಿರುತ್ತಿದ್ದರು. ಇದರ ಮೇಲೆ ಕಾವಲುಗಾರರು ಇರುತ್ತಿದ್ದರು. ಇವರ ಕಾಯಕವಿಷ್ಟೇ; ನಾಲ್ಕು ದಿಕ್ಕುಗಳನ್ನು ಸದಾ ಗಮನಿಸುವುದು. ದಾಳಿಗೆಂದು ಬರುವ ಶತ್ರು ಸೈನಿಕರನ್ನು ಸದೆ ಬಡೆಯಲು ರಾಜನಿಗೆ ಮಾಹಿತಿ ರವಾನಿಸುವುದಾಗಿತ್ತು.

ಇಂತಹ ಇತಿಹಾಸ ಸಾರುವ, ನಮ್ಮನ್ನು ರಕ್ಷಿಸುತ್ತಿದ್ದ ಹುಡೆಗಳು ಇಂದು ಮಾಯವಾಗುತ್ತಿವೆ. ಲಕ್ಷ್ಮಿಪುರವಾಡಿ ಗ್ರಾಮದಲ್ಲಿ ಹುಡೆ, ಅಗಸಿ ಅವಶೇಷಗಳು ಉಳಿದಿದ್ದು, ಹಾಳು ಬಿದ್ದ ಮನೆಯಂತೆ ಗೋಚರಿಸುತ್ತಿವೆ. ಹುಡೆ ಸುತ್ತಮುತ್ತ ಮನೆಗಳು ನಿರ್ಮಾಣವಾಗಿದ್ದು ಈಗ ಹುಡುಗಿ ಶಿಥಿಲಗೊಂಡು ಬೀಳುವ ಪರಿಸ್ಥಿತಿ ಬಂದೊದಗಿದೆ ಅಲ್ಲಿಯ ಸುತ್ತಮುತ್ತಲಿನ ಮನೆಯ ಜನರು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಒಡೆಯ ಸುತ್ತಮುತ್ತ ಹಾಗೂ ಅಗಸಿ ಪಕ್ಕದಲ್ಲಿ ಸಣ್ಣ ಮಕ್ಕಳು ಆಟ ಆಡುತ್ತಾರೆ ಹೀಗಾಗಿ ಅನಾಹುತಗಳಿಗೆ ಹುಡೆ ಹಾಗೂ ಅಗಸಿ ಕಾರಣವಾಗುವುದೇ ಯಾವುದೇ ರೀತಿಯ ಸಂದೇಹವಿಲ್ಲ ಹೀಗಿದ್ದರೂ ಸಹ  ಅಭಿವೃದ್ಧಿ ಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಮುಂದಿನ ಸಮುದಾಯಕ್ಕೆ ಇದರ ಮಹತ್ವ ತಿಳಿಸುವ ಕೆಲಸಕ್ಕೆ ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್‌ರಾಜ್ ಇಲಾಖೆಗಳು ಮುಂದೆ ಬಾರದೇ ಇರುವುದು ವಿಷಾದ ಮೂಡಿಸಿದೆ.


ಪ್ರಾಚೀನ ಕಾಲದದಲ್ಲಿ ನಿರ್ಮಾಣಗೊಂಡ ಕೋಟೆ, ದೇವಸ್ಥಾನ, ಊರ ಅಗಸಿಗಳು ಹಾಗೂ ಹುಡೆಗಳ  ರಕ್ಷಣೆ ಅಗಬೇಕು. ನಮ್ಮ ಇತಿಹಾಸ ತಿಳಿಯಲು ಇದರಿಂದ ಸಾಧ್ಯವಾಗುತ್ತದೆ. ಇದೇ ರೀತಿ ಅವಸಾನದತ್ತ ಸಾಗಿದರೆ ಮುಂದಿನ ಸಮುದಾಯಕ್ಕೆ ಇತಿಹಾಸ ಅರಿಯಲು ಸಾಧ್ಯವಾಗದು. ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಇಂತಹ ಹುಡೆಗಳನ್ನು ಸಮೀಕ್ಷೆ ಮಾಡಿ, ರಕ್ಷಿಸಬೇಕು ಎಂದರು.

-ಡಾ.ಮಲ್ಲಿನಾಥ ತಳವಾರ್, ಸಾಹಿತಿಗಳು ರಾವೂರ್.


ನಮ್ಮ ಗ್ರಾಮದಲ್ಲಿರುವ ಹಳೆಯ ಕಾಲದ ಹುಡೆ ಮತ್ತು ಅಗಸಿ ಶಿಥಿಲಗೊಂಡು ಬಿದ್ದಿವೆ, ಅವುಗಳ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಮುಂದಾಗಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಭಾಗರಾಜ್, ತಿಮ್ಮಯ್ಯ ಶಿರವಾಳ್, ತಿಮ್ಮಯ್ಯ ಸೇಡಂ, ಮತ್ತು ಯುವ ಮುಖಂಡ ಯುವರಾಜ್ ರಾಠೋಡ್ ಆಗ್ರಹಿಸಿದ್ದಾರೆ.


ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು 3 ವರ್ಷದ ಹಿಂದೆಯೇ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದಿರುವೇ, ಹಾಗೂ ಇದು ಪುರಾತನ ಇಲಾಖೆಗೆ ಸಂಬಂಧಿಸಿದ್ದು ಆಗಿದ್ದು ಆದರೂ ಸಹ ಅದೇ ರೀತಿಯ ಅನಾಹುತ ಆಗದೇ ಇರಲಿ ಎಂದು ಮುನ್ನೆಚ್ಚರಿಕೆಗಾಗಿ ಪಂಚಾಯತ್ ವತಿಯಿಂದ ಸುತ್ತಮುತ್ತಲಿನ ಮನೆಗಳಿಗೆ ನೋಟಿಸ್ ನೀಡಲಾಗಿದೆ. ನಮ್ಮ ಪಂಚಾಯತ್ ವತಿಯಿಂದ ಮಾಡಬಹುದಾದ ಕೆಲಸ ಮಾಡುತ್ತೇವೆ ಎಂದರು

- ಕಾವೇರಿ ರಾಠೋಡ್. ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ರಾವೂರ.

ಭಾನುವಾರ, ನವೆಂಬರ್ 21, 2021

ಕಸಾಪ ಚುನಾವಣೆ: ಬಿರುಸಿನಿಂದ ನಡೆದ ಮತದಾನ.

ಚಿತ್ತಾಪುರ: ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ಮತದಾನ ಬೆಳಗ್ಗೆ 8 ಗಂಟೆಯಿಂದಲೇ ಬಿರುಸಿನಿಂದ ಮತದಾನ ಆರಂಭಗೊಂಡಿದೆ.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ನಡೆಯುತ್ತಿರುವ ಕಸಾಪ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆಯುತ್ತಿದ್ದು.ಮತದಾರರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಪರಿಷತ್ತು ಕೊಟ್ಟಿರುವ ಗುರುತಿನ ಚೀಟಿ, ಆಧಾರ್‌ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಸರ್ಕಾರದ ಮಾನ್ಯತೆ ಹೊಂದಿರುವ ಮತದಾರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಾಲೂಕಿನಲ್ಲಿ ಒಟ್ಟು 439 ಮತದಾರರಲ್ಲಿ 12 ಗಂಟೆ ಸಮಯದವರೆಗೆ 124 ರಷ್ಟು ಮತದಾನ ಆಗಿದೆ ಎಂದು ಕಸಾಪ ತಾಲೂಕು ಚುನಾವಣಾ ಅಧಿಕಾರಿ ಮೋಹನ್ ರೆಡ್ಡಿ ತಿಳಿಸಿದ್ದಾರೆ.

11ಗಂಟೆಯಿಂದ ಕೆಲವೊತ್ತು ಮಳೆಸುರಿದರಿಂದ ಮತದಾನಕ್ಕೆ ಅಡ್ಡಿ ಉಂಟಾಗಿತ್ತು ಆದರೂ ಸಹ ಮತದಾರರು ಕ್ರುಷರ್ ನಲ್ಲಿ ಬಂದು ಮತದಾನ ಮಾಡಿದರು.

ಈ ಚುನಾವಣೆಯಲ್ಲಿ ರಾಜ್ಯಾದ್ಯಂತ 3 ಲಕ್ಷಕ್ಕೂ ಅಧಿಕ ಮಂದಿ ಮತದಾರರಿದ್ದಾರೆ. ಸುಮಾರು 410 ಮತಗಟ್ಟೆಗಳನ್ನು ಗುರುತಿಸಲಾಗಿದೆ.

ಮಹೇಶ್ ಜೋಶಿ, ಮ.ಚಿ ಕೃಷ್ಣ, ವ.ಚ ಚನ್ನೇಗೌಡ, ಸಿ.ಕೆ ರಾಮೇಗೌಡ, ಸಂಗಮೇಶ ಬಾದವಾಡಗಿ, ರಾಜಶೇಖರ ಮುಲಾಲಿ, ಬಾಡದ ಭದ್ರಿನಾಥ್, ಬಸವರಾಜ ಶಿ. ಹಳ್ಳೂರ, ಶಿವರಾಜ ಪಾಟೀಲ, ಸರಸ್ವತಿ ಶಿವಪ್ಪ, ವೈ ರೇಣುಕಾ,ಕೆ. ರತ್ನಾಕರ ಶೆಟ್ಟಿ, ಪ್ರಮೋದ್ ಹಳಕಟ್ಟಿ, ಕೆ. ರವಿ ಅಂಬೇಕರ, ಮಾಯಣ್ಣ, ಸುಧೀಂದ್ರರಾವ್, ಸೇರಿದಂತೆ ರಾಜ್ಯಾದ್ಯಕ್ಷ ಸ್ಥಾನಕ್ಕಾಗಿ 21 ಮಂದಿ ಅಭ್ಯರ್ಥಿಗಳು ಸ್ಪರ್ಧೆ ನಡೆಸುತ್ತಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಮಲಪ್ಪ ಹೊಸಮನಿ, ಬಿ.ಎಚ್ ನಿರಗುಡಿ, ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ವಿಶ್ವನಾಥ್ ಭಕರೆ, ವೀರಭದ್ರ ಸಿಂಪಿ 5 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇನ್ನು ಜಿಲ್ಲಾ ಘಟಕಗಳ ಅಧ್ಯಕ್ಷರ ಫಲಿತಾಂಶ ಭಾನುವಾರ ಸಂಜೆ ಘೋಷಣೆ ಆಗಲಿದೆ. ರಾಜ್ಯಾಧ್ಯಕ್ಷ ಸ್ಥಾನದ ಫಲಿತಾಂಶ 24 ಕ್ಕೆ ಘೋಷಣೆ ಆಗಲಿದೆ.

ಭಾನುವಾರ, ನವೆಂಬರ್ 14, 2021

ಇಎಸ್ಐ ಮೆಡಿಕಲ್ ಕಾಲೇಜಿನಲ್ಲಿ 15 ದಿನಗಳ ಸ್ವಚ್ಛತಾ ಆಂದೋಲನ.

ಕಲಬುರ್ಗಿ: ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಕಾಲೇಜುಗಳಲ್ಲಿ ನವೆಂಬರ್ 1 ರಿಂದ 15ರ ವರೆಗೆ ಸ್ವಚ್ಛತಾ ಆಂದೋಲನಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಶಿಕ್ಷಣ ಇಲಾಖೆ ಅವರು ಆದೇಶ ಅನ್ವಯ ಇಎಸ್ಐ ಮೆಡಿಕಲ್ ಕಾಲೇಜಿನಲ್ಲಿ 15 ದಿನಗಳ ಸ್ವಚ್ಚತಾ ಆಂದೋಲನ ಕಾರ್ಯಕ್ರಮ ನಡೆಯಿತು.

ಪಟ್ಟಣದ ಇಎಸ್ಐ ಆಸ್ಪತ್ರೆಯ ಮೆಡಿಕಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚತಾ ಆಂದೋಲನ ಕಾರ್ಯಕ್ರಮದಲ್ಲಿ  ಇಎ‌ಸ್ಐನ್ ಡೀನ್ ಇವೋನಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು 

 ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಎಲ್ಲ ಉದ್ಯೋಗಿಗಳಿಗೆ ಸ್ವಚ್ಛತಾ ಪ್ರತಿಜ್ಞೆಯನ್ನು ನೀಡಿ. ಆವರಣದ ಎಲ್ಲಾ ಸ್ಥಳಗಳಲ್ಲಿ ಸ್ಯಾನಿಟೈಜರ್ ಮಾಡಿ, ಕಡ್ಡಾಯವಾಗಿ ಮಾಸ್ಕ್ ಧರಿ‌ಸಲು ಸೂಚಿಸಿ, ಸ್ವಚ್ಛತಾ  ಕಾರ್ಯಾಗಾರ ಹಾಗು ಕೋವಿಡ್ ೧೯ ಮುನ್ನೆಚ್ಚರಿಕಾ ಕ್ರಮಗಳನ್ನು ಹಮ್ಮಿಕೊಂಡು ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ಅವಧಿಯಲ್ಲಿ ರಸ್ತೆ, ಶೌಚಾಲಯ, ವಾರ್ಡ್ ಮತ್ತು ಗಿಡ ಮರಗಳನ್ನು ನೆಡುವ ಬಗ್ಗೆ ಒತ್ತುಕೊಡಲಾಯಿತು ಎಂದರು.

ಇಎಸ್ಐ ಮೆಡಿಕಲ್ ಕಾಲೇಜಿನ ಮತ್ತು ಆಸ್ಪತ್ರೆಯಿಂದ ಜೈವಿಕ -ತ್ಯಾಜ್ಯ ನಿರ್ವಹಣೆ, ತೋಟಗಾರಿಕೆ ಮತ್ತು ಶಕ್ತಿಯ ಸಂರಕ್ಷರಣೆಗಾಗಿ ಸ್ತಪ್ ನೀರಿನ ಬಳಕೆ ಇತ್ಯಾದಿಗಳೊಂದಿಗೆ ಈ ಕೆಳಗಿನ  ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 

ಎಲ್ಲಾ ಕಟ್ಟಡಗಳ ಬೆಳಕಿನ ವ್ಯವಸ್ಥೆ,ಸೂಕ್ತವಾದ ಸ್ಥಳಗಳಲ್ಲಿ ಡಸ್ಟ್ ಬಿನ್, ಸ್ಯಾನಿಟೈಜರ್ ಹಾಗು ಹ್ಯಾಂಡ್ ವಾಶಗಳನ್ನು ಇರಿಸುವ ಬಗ್ಗೆ,ಆಸ್ಪತ್ರೆ ಆವರಣದಲ್ಲಿ ಗಿಡ ಮರಗಳನ್ನು ನೆಡುವ ಬಗ್ಗೆ, ಕಚೇರಿ ಆವರಣದಲ್ಲಿ ಸ್ವಚ್ಛತೆಯ ಕುರಿತು ವಿಚಾರಣಾ ಸಂಕಿರಣ / ಕಾರ್ಯಾಗಾರ ಗಳನ್ನುಆಯೋಜಿಸಿ ಜಾಗೃತಿ ಮೂಡಿಸುವುದು,ಫ್ಯಾನ್ , ಫೋಟೋಕಾಪಿ ಯಂತ್ರಗಳು, ಕಂಪ್ಯೂಟರ್ ಸೇರಿದಂತೆ ಎಲ್ಲಾ ಇಲೆಕ್ಟ್ರಾನಿಕ್ ಉಪಕರಣಗಳನ್ನು ಸ್ವಚ್ಛಗೊಳಿಸುವುದು.

ಈ ಸಂದರ್ಭದಲ್ಲಿ ಡಾ.ಕೆ ಪಿ ಪದ್ಮಾಜ್,ಡಾ.ದಿನಂತಾ ಪೂಜಾರಿ, ಡಾ.ಸ್ವಾತಿ, ಬಾಬುಲಾಲ್, ಸೇರಿದಂತೆ ಇತರರಿದ್ದರು.

ಮಂಗಳವಾರ, ನವೆಂಬರ್ 9, 2021

ಬಿಜೆಪಿಗರು ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ: ಖರ್ಗೆ.

ಚಿತ್ತಾಪುರ: ಕಾಂಗ್ರೆಸ್ ಸರ್ಕಾರದ ಅವಧಿಯ ಅಭಿವೃದ್ಧಿ ಹಾಗೂ ಪ್ರಸ್ತುತ ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮದ ಬಗ್ಗೆ ಬಿಜೆಪಿಗರು ಬಹಿರಂಗ ಚರ್ಚೆ ಬರಲಿ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ತಾಲೂಕಿನ ಮಾಡಬೂಳ ಗ್ರಾಮದಲ್ಲಿ 2.79 ಕೋಟಿ‌ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಜಲಜೀವನ ಮಿಷನ್ ಅಡಿಯಲ್ಲಿ ಮನೆ-ಮನೆಗೆ ನೀರು ಒದಗಿಸುವ ಯೋಜನೆ, ಕರ್ನಾಟಕ ಪಬ್ಲಿಕ್ ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸುವುದು ಹಾಗೂ ಘನತ್ಯಾಜ್ಯ ಘಟಕ ನಿರ್ಮಾಣ ಯೋಜನೆಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು ಕಲ್ಯಾಣ‌ ಕರ್ನಾಟಕ ಅದರಲ್ಲೂ ಕಲಬುರಗಿ ಎಂದರೆ ಬಿಜೆಪಿ ಸರ್ಕಾರಕ್ಕೆ ಅಲರ್ಜಿಯಾಗಿದೆ.

ಎರಡುವರೆ ವರ್ಷದ ಅಧಿಕಾರಾವಧಿಯಲ್ಲಿ ಇಬ್ಬರು ಸಿಎಂ ಗಳನ್ನು ಬದಲಾವಣೆ ಮಾಡಿದ್ದೆ ಬಿಜೆಪಿ ಪಕ್ಷದ ಸಾಧನೆ ಏನೂ ಎಂದು ಟೀಕಿಸಿದರು.

ಅಭಿವೃದ್ದಿ ವಿಚಾರದಲ್ಲಿ ನಮ್ಮೊಂದಿಗೆ ಬಹಿರಂಗ ಚರ್ಚೆಗೆ  ಬಿಜೆಪಿಗರು ಬರಲಿ ನಾನು ಅವರಿಗೆ ಉತ್ತರಿಸುತ್ತೇನೆ, ಆಗ ನಿಮ್ಮೆಲ್ಲರ ಸೇವೆ ಮಾಡಲು ಯಾರು ಇರಬೇಕು ಎಂದು ನೀವೆ  ನಿರ್ಧರಿಸಿ ಎಂದು ಸವಾಲ್ ಹಾಕಿದರು.

ಕಳೆದ ವರ್ಷದ ಹಿಂದೆ ಇದೇ ದಿನದಂದು ನೋಟ್ ಬ್ಯಾನ್ ಮಾಡಿದ ಮೋದಿ ಸರ್ಕಾರ ಜನಸಾಮಾನ್ಯರ ಸಂಕಟಕ್ಕೆ ಕಾರಣವಾದರು. ಜೀರೋ ಅಕೌಂಟ್ ಓಪನ್ ಮಾಡಿಸಿ ಪ್ರತಿಯೊಬ್ಬರ ಅಕೌಂಟ್ ನಲ್ಲಿ ಹದಿನೈದು ಲಕ್ಷ ಹಾಕುವುದಾಗಿ ಹೇಳಿದವರು ಒಂದು ರೂಪಾಯಿನೂ ಹಾಕಲಿಲ್ಲ. ಜನಧನ್ ಯೋಜನೆ ಜನರಿಂದ ಧನ ಕೊಳ್ಳೆಹೊಡೆಯುವ ಯೋಜನೆಯಾಗಿ ಪರಿವರ್ತನೆಯಾಗಿದೆ ಎಂದು ಟೀಕಿಸಿದರು. ಮೋದಿ ಹಾಗೂ ಶಾ ಅವರನ್ನು ಚೋರ್ ಗುರು ಚಾಂಡಾಲ ಶಿಷ್ಯ ಎಂದು ಹೆಸರಿಸಿದ ಶಾಸಕರು ಗ್ರಾಮೀಣ ಭಾಗದ ಹೆಣ್ಣುಮಕ್ಕಳು ತಮ್ಮ ತಮ್ಮ ಸಂಸಾರದ ತಾಪತ್ರಯಕ್ಕೆ ಎಂದು ಕೂಡಿಟ್ಟ ಅಷ್ಟು ಇಷ್ಟು ದುಡ್ಡನ್ನೂ ಕೂಡಾ ಇವರು ತೆಗೆದುಕೊಂಡರು ಎಂದರು.

ನೋಟು ಅಮಾನ್ಯೀಕರಣದಿಂದಾಗಿ ದೇಶದಲ್ಲಿ ಈ ಹಿಂದೆ 50 ವರ್ಷದಲ್ಲಿ ಆಗಿರದಂತ ನಿರುದ್ಯೋಗ ಈಗ ಸೃಷ್ಠಿಯಾಗಿದೆ. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಠಿಸುವ ವಾಗ್ಧಾನ ನೀಡಿದ್ದ ಮೋದಿ ಭರವಸೆ ನೆರವೇರಿಸಲಿಲ್ಲ ಎಂದರು. ಮಾಡಬೂಳ ಸುತ್ತಮುತ್ತ ಗ್ರಾಮಗಳ ಅಭಿವೃದ್ದಿ ಹಾಗೂ ಆರ್ಥಿಕತೆ ಸದೃಢತೆಗಾಗಿ ( National Investment Manufacturing Zone ) ನಿಮ್ಝ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿತ್ತು. ಬಿಜೆಪಿ ಯಾವಾಗ ಅಧಿಕಾರಕ್ಕೆ ಬಂದಿತೋ ಈ ಯೋಜನೆ ಕೈ ತಪ್ಪಿ ಹೋಗಿದೆ.

ಚಿತ್ತಾಪುರ ಮತಕ್ಷೇತ್ರದ ಗ್ರಾಮಗಳಲ್ಲಿ ಶಿಕ್ಷಣದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ.  ವಾಡಿ ಪಟ್ಟಣದಲ್ಲಿ ಬಡ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎಜುಕೇಷನ್ ಹಬ್ ನಿರ್ಮಾಣವಾಗಲಿದೆ. ಮರಗೋಳ ಗ್ರಾಮದ ಬಳಿ ರೂ 100 ಕೋಟಿ‌ ವೆಚ್ಚದಲ್ಲಿ ಪ್ರಾಣಿ ಸಂಗ್ರಹಾಲಯ ನಿರ್ಮಾಣಗೊಳ್ಳಲಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ಅಪೌಷ್ಠಿಕಾಂಶ ಹೊಂದಿದ 6 ಸಾವಿರ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸಲಾಗಿದೆ. ಅಧಿಕಾರದಲ್ಲಿ ಇರುವ ಬಿಜೆಪಿಗರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಪ್ರಾಮಾಣಿಕ ಪ್ರಯತ್ನ, ಅಭಿವೃದ್ದಿ ಪರ ಚಿಂತನೆಯುಳ್ಳವರನ್ನು ಆಯ್ಕೆ ಮಾಡಿ ಕಳಿಸಬೇಕು ಎಂದು ಜನರಿಗೆ ಕರೆ ನೀಡಿದ ಶಾಸಕರು ಹಣದ ಆಸೆಗೆ ಬಿದ್ದು ಅಭಿವೃದ್ದಿಪರ ಇರುವವರನ್ನ ನೀವು ತಿರಸ್ಕರಿಸಬಾರದು ಎಂದು ಮನವಿ ಮಾಡಿದರು.

ಕೌಟುಂಬಿಕ ಕಾರ್ಯಕ್ರಮಗಳಿಗೆ ಭೇಟಿ‌ ನೀಡಬೇಕು, ಜಯಂತಿಗಳಿಗೆ ಅಟೆಂಡ್ ಮಾಡಬೇಕು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂದು ಜನರು ನಮ್ಮಿಂದ ನಿರೀಕ್ಷೆ ಮಾಡುತ್ತಿದ್ದಾರೆ. ಇದು ಬದಲಾದ ರಾಜಕೀಯ ಪರಿಸ್ಥಿತಿ. ಅದರ ಬದಲಿಗೆ ನನ್ನಿಂದ ಅಭಿವೃದ್ದಿ ಯೋಜನೆಗಳನ್ನು ಪಡೆದುಕೊಳ್ಳುವುದರ ಬಗ್ಗೆ ಜನರು ಯೋಚಿಸಬೇಕು ಎಂದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಭೀಮಣ್ಣ ಸಾಲಿ, ರಮೇಶ್ ಮರಗೋಳ, ಸುನೀಲ್ ದೊಡ್ಡಮನಿ, ಶಂಭುಲಿಂಗ ಗುಡಗುರ್ತಿ ಸೇರಿದಂತೆ ಹಲವರಿದ್ದರು.

ಶುಕ್ರವಾರ, ನವೆಂಬರ್ 5, 2021

ಅಪ್ಪುವಿನ ಗೋಶಾಲೆ ಮತ್ತು ಅನಾಥಾಶ್ರಮದ ಜವಾಬ್ದಾರಿ ದರ್ಶನ್ ತೆಗೆದುಕೊಂಡಿದ್ದಾರೆ.

ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಂತ್ಯ ಕ್ರಿಯೆಗಳು ಸರ್ಕಾರದ ಗೌರವಗಳೊಂದಿಗೆ ನೆರವೇರಿಸಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದೇವರು ಧೈರ್ಯ ಕೊಡಲಿ ಎನ್ನುವುದೇ ಎಲ್ಲರ ಆಶಯ.

ಕುಟುಂಬಸ್ಥರು, ಸ್ನೇಹಿತರು ಅಭಿಮಾನಿ ಬಳಗ ಸೇರಿದಂತೆ ಎಲ್ಲರೂ ಅಪ್ಪು ನಿಧನ ದಿಂದ ಬಹಳ ದು:ಖಿತರಾಗಿರಗಿದ್ದಾರೆ. ಇತ್ತೀಚೆಗೆ ತಮಿಳು ಚಿತ್ರರಂಗದ ನಟ ವಿಶಾಲ್ ಅವರು ಅಪ್ಪು ಅವರು ಓದಿಸುತ್ತಿದ್ದ, 1800 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಕಾರ್ಯಕ್ರಮ ಒಂದರಲ್ಲಿ ಹೇಳಿಕೆ ನೀಡಿದ್ದರು. 

ಇದೀಗ ನಟ ದರ್ಶನ್ ಅವರು ಸಹ ಅಪ್ಪು ಅವರ ಬಗ್ಗೆ ಮುಖ್ಯವಾದ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ.

ಇಷ್ಟು ದಿನಗಳ ಕಾಲ ಪುನೀತ್ ರಾಜ್ ಕುಮಾರ್ ಅವರು ನೋಡಿಕೊಳ್ಳುತ್ತಿದ್ದ ಗೋಶಾಲೆ ಮತ್ತು ಅನಾಥಾಶ್ರಮದ ಜವಾಬ್ದಾರಿ ನಾನು ನೋಡಿಕೊಳ್ಳುವುದಾಗಿ ನಟ ದರ್ಶನ್ ಹೇಳಿದ್ದಾರೆ.ಇದೀಗ ಅಪ್ಪು ಅವರ ಕೆಲಸವನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ.

ಪುನೀತ್,ಅನುಮಾನಾಸ್ಪದ ಸಾವು: ದಾಖಲಾಯ್ತು ದೂರು.


ಬೆಂಗಳೂರು: ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣದಿಂದಾಗಿ ಇಡೀ ಕರ್ನಾಟಕವೇ ಶೋಕಸಾಗರದಲ್ಲಿ ಮುಳುಗಿದೆ. ಅಪ್ಪು ದೈಹಿಕವಾಗಿ ನಮ್ಮನ್ನು ಆಗಲಿ 6 ದಿನಗಳೇ ಕಳೆದರೂ ಅವರ ಅಗಲಿಕೆಯ ನೋವಿಂದ ಹೊರಬರಲು ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ.

ಈ ಮಧ್ಯೆ ನಟ ಪುನೀತ್ ರಾಜ್ ಕುಮಾರ್ ಅನುಮಾನಾಸ್ಪದ ಸಾವಿನ ಕುರಿತು ಸಮಗ್ರ ತನಿಖೆ ಮಾಡಿ ಸತ್ಯಾಸತ್ಯತೆಯನ್ನ ಜನರ ಮುಂದಿಡಬೇಕೆಂದು ಅಪ್ಪು ಅಭಿಮಾನಿಯಾದ ಅರುಣ್ ಪರಮೇಶ್ವರ್ ಎಂಬುವವರು ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಇರೋದೇನು?

೨೯.೧೦.೨೦೨೧ ಆ ದಿನದಂದು ಪುನೀತ್ ರಾಜಕುಮಾರ್ ಅವರ ಸಾವಿನ ಸುದ್ದಿ ಮಾಧ್ಯಮದ ಮೂಲಕ ಸಮಗ್ರ ನಾಡಿನ ಕರ್ನಾಟಕ ಜನರಿಗೆ ತಿಳಿಯುತ್ತದೆ ಹಾಗೂ ಅವರು ಮನೆಯಿಂದ ಕ್ಲಿನಿಕ್ ಗೆ ಹೋಗಬೇಕಾದರೆ ಆರೋಗ್ಯವಾಗಿಯೇ ಹೋಗಿರುತ್ತಾರೆ. ಕ್ಲಿನಿಕ್ನಲ್ಲಿ ಯಾವ ರೀತಿಯ ತಪಾಸಣೆ ನಡೆಸಲಾಯಿತು ಹಾಗೂ ನಡೆಸಿದ ಮೇಲೆ ವಿಕ್ರಂ ಆಸ್ಪತ್ರೆಗೆ ಹೋಗಲು ಯಾಕೆ ತಡವಾಯಿತು, ವಿಕ್ರಮ ಹಾಸ್ಪಿಟಲ್ ಗೆ 15 ನಿಮಿಷ ತಡವಾಗಿ ಹೋಗಲು ಏನು ಕಾರಣ? ಎಲ್ಲಾ ಅನುಮಾನಗಳಿದ್ದು ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು.

ಹಾಗೂ ಕ್ಲಿನಿಕ್ ನಲ್ಲಿರುವ ಸಿಸಿಟಿವಿ ವಿಡಿಯೋವನ್ನು ಯಾಕೆ ಮಾಧ್ಯಮಗಳಿಗೆ ನೀಡುತ್ತಿಲ್ಲ ಹಾಗೂ ಅಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷವೇ ಪುನೀತ್ ರಾಜಕುಮಾರ್ ಅವರ ಸಾವಿಗೆ ಕಾರಣವೇ ಹಾಗೂ ಅವರು ಅಷ್ಟು ತುರ್ತುಪರಿಸ್ಥಿತಿಯಲ್ಲಿ ಇದ್ದರೂ ಸಹ ಅವರನ್ನು ಆಂಬುಲೆನ್ಸ್ ನಲ್ಲಿ ಕಳುಹಿಸಲಿಲ್ಲ ಎಲ್ಲಾ ಗೊಂದಲಗಳಿಗೆ ಸೂಕ್ತವಾದ ಪರಿಹಾರವನ್ನು ಮಾಡಬೇಕಾಗಿ ದೂರಿನಲ್ಲಿ ಪರಮೇಶ್ವರ್ ಅವರು ಉಲ್ಲೇಖಿಸಿದ್ದಾರೆ.

ಸೋಮವಾರ, ನವೆಂಬರ್ 1, 2021

ಭಾಷೆಗೆ ಆದ್ಯತೆ ನೀಡಿ, ಉಳಿಸಿ, ಬೆಳೆಸಿ: ಸಿದ್ದುಗೌಡ

ಚಿತ್ತಾಪುರ: ರಾಜ್ಯದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿ, ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕನ್ನಡಿಗರೆಲ್ಲರೂ ಮಾಡಲು ಮುಂದಾಗಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್ ಹೇಳಿದರು.

ಪಟ್ಟಣದ ತಹಸೀಲ್ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ನಿಮಿತ್ಯ ಕನ್ನಡಾಂಬೆ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ತಹಸೀಲ್ ಕಚೇರಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನ್ನಡ ಭಾಷೆಗೆ ಮೊದಲ ಆದ್ಯತೆಯನ್ನು ನೀಡಬೇಕು. ಹಾಗೆಂದು ಬದುಕಿನ ಭಾಷೆಯಾದ ಇಂಗ್ಲಿಷ್‌ ಅನ್ನು ಕಡೆಗಣಿಸಬಾರದು.

ಕನ್ನಡ ಭಾಷೆ ಕೇವಲ ಒಂದೆರಡು ದಿನದಿಂದ ನಿರ್ಮಾಣವಾದದ್ದು ಅಲ್ಲ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಕೇವಲ ಭಾಷಣ ಮಾಡುವುದರಿಂದ ಭಾಷೆಯ ಅಭಿವೃದ್ಧಿ ಸಾಧ್ಯವಿಲ್ಲ. ಭಾಷೆ ಬಗ್ಗೆ ಚರ್ಚೆ ನಡೆದಾಗ ಮಹತ್ವದ ಅಂಶಗಳನ್ನು ದಾಖಲೀಕರಣ ಮಾಡುವ ಅಗತ್ಯ ಇದೆ ಎಂದರು.

ಕರವೇ ತಾಲೂಕು ಅಧ್ಯಕ್ಷ ನರಹರಿ ಕುಲಕರ್ಣಿ ಮಾತನಾಡಿ ನಾವು ಕನ್ನಡ ಉಳಿಸಿ ಬೆಳೆಸುವ ಜೊತೆಗೆ ನಮ್ಮ ಸುತ್ತಲೂ ವಾಸವಾಗಿರುವ ಬೇರೆ ರಾಜ್ಯದ ಜನರಿಗೂ ಕನ್ನಡ ಕಲಿಸುವ ಮೂಲಕ ನಮ್ಮ ಭಾಷೆಯ ರಕ್ಷಣೆಗೆ ಮುಂದಾಗಬೇಕಿದೆ. ಆ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸುವ ಬದ್ಧತೆಯನ್ನು ನಾವು ಮೆರೆಯಬೇಕಿದೆ ಎಂದರು.

ತಹಸೀಲ್ದಾರ್ ಉಮಾಕಾಂತ್ ಹಳ್ಳೆ, ಪುರಸಭೆ ಅಧ್ಯಕ್ಷ ಚಂದ್ರಶೇಖರ್ ಕಾಶಿ,ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೀಪಕ್ ಹೊಸ್ಸೂರಕರ್, ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಬಸವರಾಜ ಬಳ್ಳೂಂಡಗಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀಮತಿ ನೀಲಗಂಗಾ ಬಬಲಾದ್, ಸಿಪಿಐ ಕೃಷ್ಣಪ್ಪ ಕಲ್ಲದೇವರ, ವೇದಿಕೆಯ ಮೇಲಿದ್ದರು. ಸೇರಿದಂತೆ ತಾಲೂಕ ಅಧಿಕಾರಿಗಳು ಸಿಬ್ಬಂದಿ ವರ್ಗ ಹಾಗೂ ಇತರರಿದ್ದರು.

 

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...