ಮಣಿಕಂಠ ರಾಠೋಡ ಕ್ಷಮೆ ಯಾಚನೆಗೆ ಮೈನಾಳಕರ್ ಆಗ್ರಹ.
ಮಣಿಕಂಠ ರಾಠೋಡ ಕ್ಷಮೆ ಯಾಚನೆಗೆ ಮೈನಾಳಕರ್ ಆಗ್ರಹ.
ಚಿತ್ತಾಪುರ: ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಅವರನ್ನು ಅವಾಚ್ಯವಾಗಿ ಸಂಬೋಧಿಸಿ ಅವಹೇಳನ ಮಾಡಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರು ಕೂಡಲೆ ಕ್ಷಮೆಯಾಚಿಸಬೇಕು ಎಂದು ಕೋಲಿ ಸಮಾಜದ ಯುವ ಘಟಕದ ನಗರ ಅಧ್ಯಕ್ಷ ಬಸವರಾಜ ಮೈನಾಳಕರ್ ಆಗ್ರಹಿಸಿದ್ದಾರೆ.
ಸಾರ್ವಜನಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಘನತೆ ಹೊಂದಿರುವವರನ್ನು ಅವಹೇಳನ ಮಾಡಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅಶಾಂತಿಯ ವಾತಾವರಣ ಸೃಷ್ಟಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ