ರೋಣದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ.

ಚಿತ್ತಾಪುರ: ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷರಾಗಿ ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ರೋಣದ ಆವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ನಿವೃತ್ತ ನೌಕರರ ಸಭೆಯಲ್ಲಿ ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಅಧ್ಯಕ್ಷರ ಆಯ್ಕೆ ಮಾಡಿದ್ದು ತಾಲೂಕು ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಕಿಶನ್ ರಾಠೋಡ ಸೂಚಿಸಿದರು ಮೋನಯ್ಯ ಪಂಚಾಳ ಅನುಮೋದನೆ ಮಾಡಿದರು. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷರ ವಿಜಯಕುಮಾರ ಲೊಡ್ಡೆನೋರ ಖಜಾಂಚಿ ಮಲ್ಲಣ್ಣ ಮಾಡಬೂಳ, ಮಲ್ಲಿಕಾರ್ಜುನ ಮಲಕೂಡ, ಸುಭಾಷ್ ಮೆಂಗಜೀ ಆರೋಗ್ಯ ಇಲಾಖೆಯ ನಿಜಾಮೋದಿನ್, ಶಿವಾಜಿ ನಿಂಬೆಳಕರ, ಬಸವರಾಜ ಕಲಬುರ್ಗಿ ಬಾಗೋಡಿ, ಹಾಜಪ್ಪ ಶಹಾಬಾದ್, ಶಶಿಧರ, ಮಹ್ಮದ್ ಅಬ್ದುಲ್ ನಬಿ ರವಿ ಪೊತ್ದಾರ, ಇದ್ದರು.ಮಹಾದೇವಪ್ಪ ಉಪ್ಪಾರ ನಿರೂಪಿಸಿ, ಕಿಶನ್ ರಾಠೋಡ ವಂದಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.