ಬುಧವಾರ, ಅಕ್ಟೋಬರ್ 8, 2025

ನಾಳೆ ಜಮೀನು ಹರಾಜು ಪ್ರಕ್ರಿಯೆ: ತಹಸೀಲ್ದಾ‌ರ್

ಚಿತ್ತಾಪುರ: ನ್ಯಾಯಾಲಯದ ಆದೇಶದಂತೆ ಬಾಂಡ್ ಮೊತ್ತ ಭರಿಸದೆ ಇರುವುದರಿಂದ ತಾಲೂಕಿನ ಯರಗಲ್ ಗ್ರಾಮದ ಸ.ನಂ:4/*/1 ವಿ:3-30ಎ.ಗುಂ ಜಮೀನಿನ ಹರಾಜು ಪ್ರಕ್ರಿಯೆ ಅ. 9 ರಂದು ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಲಾಗಿರುತ್ತದೆ. ಕಾರಣ ಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿಯುಳ್ಳವರು ಪಾಲ್ಗೊಳ್ಳಲು ಅವಕಾಶ ಇರುತ್ತದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

Crl Misc No:453/2020, Cr NO:14/2019(RG Nagar PS V/s Jakeer &Ors) reg : ಆದೇಶದಂತೆ ಬಾಂಡ್ ಮೊತ್ತ ಭರಿಸುವಂತೆ ನೋಟಿಸ್-37 ಮತ್ತು ನೋಟಿಸ್‌-38 ನೀಡಲಾಗಿರುತ್ತದೆ ಆದರೆ ಕಂದಾಯ ನಿರೀಕ್ಷಕರು ಚಿತ್ತಾಪುರ ರವರು ಅರ್ಜುನ ತಂದೆ ಮರೆಪ್ಪಾ ರವರು ಯರಗಲ್ ಗ್ರಾಮದಲ್ಲಿ ಹಾಗೂ ಶಹಾಬಾದ ಪಟ್ಟಣದಲ್ಲಿ ವಾಸವಿರುವುದಿಲ್ಲ ಎಂದು ವರದಿ ಸಲ್ಲಿಸಿರುತ್ತಾರೆ. ವಿಚಾರಣೆ ಮುಂದುವರೆದು ಸೆ.24 ರಂದು ದಿನದಂದು ಮಾನ್ಯ ನ್ಯಾಯಾಧಿಶರು ಬಾಂಡ್ ಮೊತ್ತ ಭರಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿರುತ್ತಾರೆ ಹಾಗೂ ಆರಕ್ಷಕರು ಉಪನಿರೀಕ್ಷಕರು ಪೋಲಿಸ್ ಠಾಣೆ ಚಿತ್ತಾಪುರ ರವರಿಗೆ ಪತ್ರ ಬರೆಯಲಾಗಿದ್ದು ಅರ್ಜುನ ಮರೆಪ್ಪಾ ರವರನ್ನು ಬಂಧಿಸಿ ಹಾಜರಪಡಿಸುವಂತೆ ಸೂಚಿಸಲಾಗಿರುತ್ತದೆ.

ಪ್ರಯುಕ್ತ ಪಹಣಿ ಮಾಲಿಕರಾದ ಅರ್ಜುನ ತಂ ಮರೆಪ್ಪಾ ರವರ ಯರಗಲ್ ಗ್ರಾಮದಲ್ಲಿ ವಾಸವಿರದೆ ಇರುವುದರಿಂದ ಯರಗಲ್ ಗ್ರಾಮದ ಸ.ನಂ:4/*/1 ವಿ:3-30ಎ.ಗುಂ ಜಮೀನಿನ ಹರಾಜು ಪ್ರಕ್ರಿಯೆ ಅ. 9 ರಂದು ಬೆಳಿಗ್ಗೆ 11.00 ಗಂಟೆಗೆ ನಿಗದಿಪಡಿಸಲಾಗಿರುತ್ತದೆ. ಕಾರಣ ಯರಗಲ್ ಗ್ರಾಮದ ಸ.ನಂ:4/*/1 2:3-302. ಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿಯುಳ್ಳವರು ಪಾಲ್ಗೊಳ್ಳಲು ಅವಕಾಶ ಇರುತ್ತದೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...