ಶೂ ಎಸೆಯುವ ಯತ್ನ ಭಯೋತ್ಪಾದಕ ಕೃತ್ಯ: ಬುಳಕರ ಆಗ್ರಹ

ಚಿತ್ತಾಪುರ: ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿಯವರ ಮೇಲೆ ವಕೀಲನೊಬ್ಬ ಶೂ ಎಸೆಯುವ ಪ್ರಯತ್ನ ಮಾಡಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಯುವ ಮುಖಂಡ ಸಂಜಯ ಬುಳಕರ ಹೇಳಿದರು. 

ಬುಧವಾರ ತಹಸೀಲ್ ಕಾರ್ಯಾಲಯಕ್ಕೆ ತೆರಳಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಸಲ್ಲಿಸಿದರು. ತದನಂತರ ಮಾತನಾಡದ ಅವರು ಈ ದೇಶದ ಸರ್ವೋಚ್ಚ ನ್ಯಾಯಮೂರ್ತಿಗಳ ಮೇಲೆಯೇ ಕೋರ್ಟ್ ಹಾಲ್ ನಲ್ಲೇ ಈ ಕೃತ್ಯ ನಡೆದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದರು.

ಇದೊಂದು ಭಯೋತ್ಪಾದಕ ಕೃತ್ಯ, ಇದು ಈ ದೇಶದ ಸಂವಿಧಾನವನ್ನು ಒಪ್ಪದ ಸಮುದಾಯದವರ ಮನೋ ಸ್ಥಿತಿಯಾಗಿದೆ.ದಲಿತರೊಬ್ಬರು ಈ ಸ್ಥಾನಕ್ಕೆ ಬಂದಿರುವುದನ್ನೆ ಸಹಿಸಲಾಗದ ದುಷ್ಟ-ಮನಸುಗಳು ಈ ರೀತಿಯ ಕೃತ್ಯವನ್ನು ಬೆಂಬಲಿಸುತ್ತವೆ, ಮತ್ತು ಇಂತಹ ಕೃತ್ಯದಲ್ಲಿ ತೊಡಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ನ್ಯಾಯಮೂರ್ತಿಗಳು ದಲಿತರು, ಬೌದ್ಧ ಧರ್ಮದ ಉಪಾಸಕರು ಆಗಿದ್ದು. ಅದೇ ಮುಖ್ಯ ಕಾರಣವನ್ನಾಗಿಸಿಕೊಂಡು ಸನಾತನ ಧರ್ಮದ ಹೆಸರಲ್ಲಿ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ಶೂ ಎಸೆಯುವ ದುಷ್ಟ ಪ್ರಯತ್ನ ನಡೆಸಿರುವಾಗ ಈ ದೇಶದ ಸಾಮಾನ್ಯ ದಲಿತರ ಪಾಡೇನು ಎಂಬುದನ್ನು ಯೋಚಿಸಬೇಕಾಗಿದೆ. 

ಈ ಕೃತ್ಯ ಸಂವಿಧಾನದ ಮೇಲೆ ನಡೆದ ತೀವ್ರ ಹಲ್ಲೆಯಾಗಿದೆ. ಇಂಥ ವ್ಯಕ್ತಿಗಳ ಹಿಂದಿರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕಾಶಿ ವಡ್ಡರ ಸಮಾಜದ ಸರಪಂಚ್ ವಿಠ್ಠಲ್ ಕಾಶಿಯವರು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಸಂಧರ್ಭದಲ್ಲಿ ದಿಗ್ಗಾoವ ಗ್ರಾಮ ಅಧ್ಯಕ್ಷರಾದ ಹರಾಳಯ್ಯ ಬಡಿಗೇರ,ಸಾಬಣ್ಣ ಕಲಬುರಗಿ, ಚಂದ್ರಕಾಂತ್ ಕಾಶಿ,ದೇವಪ್ಪ ತಳವಾರ, ನರೇಂದ್ರ ರೆಡ್ಡಿ ಬಂಕಲಗಿ, ಬಸವರಾಜ್ ಮೈನಾಳಕರ,ಗುರು ಪಾಟೀಲ್, ಭೀಮು ಉಪಾರ, ಹುಸನಪ್ಪ, ರಾಹುಲ್, ಮಹೇಶ್ ದೇವರ ಸೇರಿದಂತೆ ಇತರರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.

ಮನೆಗಳ ಹಂಚಿಕೆ ಪ್ರಕ್ರಿಯೆ ಮುಂದೂಡಲಾಗಿದೆ

ರಾಜ್ಯೋತ್ಸವ ಪ್ರಶಸ್ತಿಗೆ ಏಳು ಜನ ಸಾಧಕರ ಆಯ್ಕೆ.

ಬಜಾಜ್ ಕಾಂಪ್ಲೆಕ್ಸ್ ನಲ್ಲಿ ಅನೈತಿಕ ಚಟುವಟಿಕೆ.

ತಾಲ್ಲೂಕು ಅಧಿಕಾರಿಗಳ ವಿರುದ್ಧ ಸಚಿವರ ಅಸಮಾಧಾನ.

ಪ್ರಯಾಗರಾಜ್ ಪವಿತ್ರ ತೀರ್ಥಸ್ಥಳ: ಕಂಬಳೇಶ್ವರ ಶ್ರೀ.

ತಹಸೀಲ್ ಕಛೇರಿಯಲ್ಲಿ ಪೋಲೀಸ ಪೇದೆ ಸಾವು.

ಮಗನ ಸಾಧನೆಗೆ ತಂದೆ-ತಾಯಿ ಮೆಚ್ಚುಗೆ.