ಎರಡನೇ ಬಾರಿ ಅಧ್ಯಕ್ಷರಾಗಿ ರಮೇಶ್ ಹಡಪದ ಆಯ್ಕೆ

ಚಿತ್ತಾಪುರ: ತಾಲೂಕು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷರಾಗಿ ರಮೇಶ್ ಕೊಲ್ಲೂರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಈರಣ್ಣಸಂಣ್ಣೂರ್ ತಿಳಿಸಿದ್ದಾರೆ. ಪಟ್ಟಣದ ಹಡಪದ ಅಪ್ಪಣ್ಣ ಸಮಾಜದ ಸಮುದಾಯ ಭವನದಲ್ಲಿ ನಡೆದ ಸಭೆ ಯಲ್ಲಿ ಸರ್ವಾನುಮತಿಯಿಂದ ಆಯ್ಕೆ ಮಾಡಲಾಗಿದೆ. ಈ ಸಭೆಯಲ್ಲಿ ರಾಜ್ಯ ಕಾನೂನು ಸಲಹೆಗಾರ ರಮೇಶ್ ಮಲ್ನೋಡ,ರಾಜ್ಯ ಸಂಘಟನೆ ಕಾರ್ಯದರ್ಶಿ ಬಸವರಾಜ ಹಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ್ ಸೂಗೂರು, ಜಿಲ್ಲಾ ನಗರ ಅಧ್ಯಕ್ಷ ಮಲ್ಲಿಕಾರ್ಜುನ್ ಸವಳಗಿ,ಸಮಾಜದ ಹಿರಿಯ ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಅಶೋಕ್ ಚಿತ್ತಾಪುರ,ಅಶೋಕ್ ಚೌಕಿ, ಲಕ್ಷ್ಮಣ ವಾಡಿ, ಮಲ್ಲಿಕಾರ್ಜುನ್ ರಾಜೋಳಿ, ಶಿವಾನಂದ್ ವಾಡಿ, ಕಲ್ಯಾಣ್ ರಾವ್ ಗುಂಡಗುತ್ತಿ , ಶೇಖಣ್ಣ ದಂಡಗುಂಡ, ಶಿವಕುಮಾರ್ ನಾಲ್ವರ್, ಸಂತೋಷ್ ಕಟಂದೇವರಹಳ್ಳಿ, ಸೇರಿದಂತೆ ಸಮಾಜದ ಮುಖಂಡ ಯುವಕರು ಉಪಸ್ಥಿತರಿದ್ದರು.