ಭಾರೀ ಮಳೆಗೆ ಮನೆ ಕುಸಿತ: ಪ್ರಾಣಾಪಾಯದಿಂದ ಪಾರು.
ಚಿತ್ತಾಪೂರ: ನಾಗಾವಿನಾಡಿನಲ್ಲಿ ಎರಡು ದಿನಗಳಿಂದ ರಾತ್ರಿವಿಡಿ ಭಾರೀ ಮಳೆಯಾಗಿದ್ದು, ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಪಟ್ಟಣದಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ ಈ ವೇಳೆ ಮನೆಯಲ್ಲಿದ್ದ ಕುಟುಂಬಸ್ಥರಿಗೆ ಯಾವುದೇ ಹಾನಿಯಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಟ್ಟಣದ ಸುಲೆಗಾವ್ ಗಲ್ಲಿಯಲ್ಲಿ ಮಲ್ಲಿಕಾರ್ಜುನ ಬಸವರಾಜ ವಾರದ್, ತನುಜಾ ಗಂಡ ಸುಭಾಷ್, ಮತ್ತು ಚೌಡಮ್ಮ ಗುಡಿಯ ಹತ್ತಿರದ ರಾಮಣ್ಣ ಭೀಮ್ ಸಿಂಗ್ ಇವರ ಮನೆಗಳಿಗೆ ಹಾನಿಯಾಗಿದ್ದು ಮನೆಗಳಿಗೆ ಗ್ರಾಮ ಲೆಕ್ಕಾಧಿಕಾರಿ ಮೈನೋದ್ದಿನ್ ಹಾಗೂ ಪುರಸಭೆ ಇಲಾಖೆಯ ಸಿಬ್ಬಂದಿ ವರ್ಗ ಭೇಟಿ ನೀಡಿ ಸರ್ಕಾರದಿಂದ ಬರುವ ಸೌಲಭ್ಯವನ್ನು ಕಲ್ಪಿಸಲಾಗುವ ಭರವಸೆ ನೀಡಿದ್ದಾರೆ.
ಮಳೆಯಿಂದ ಮನೆಗಳು ಕುಸಿತದ ಮಾಹಿತಿ ಬಂದಿದೆ ಕೊಡಲೇ ಪರಿಶೀಲಿಸಿ ಹಾನಿಗೊಳಗಾದ ಕುಟುಂಬಗಳಿಗೆ ಸರ್ಕಾರದಿಂದ ಬರುವ ಸೌಲಭ್ಯ ಅತಿ ಶೀಘ್ರದಲ್ಲಿ ಕೂಡಿಸುವುದಾಗಿ ಹೇಳಿದರು ಹಾಗೂ ಇನ್ನೂ ಮಳೆ ಬರುವ ಸಂಭವವಿದೆ ತಾಲೂಕಿನ ಎಲ್ಲಾ ಗ್ರಾಮಸ್ಥರು ಎಚ್ಚರ ವಹಿಸಬೇಕು ಎಂದು ತಿಳಿಸಿದರು.
- ನಾಗಯ್ಯ ಹೀರೆಮಠ.
ತಹಸೀಲ್ದಾರರು ಚಿತ್ತಾಪೂರ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ