ಸತತವಾಗಿ ಮೂರು ಬಾರಿ ಕಬ್ಬಡ್ಡಿ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ

ಚಿತ್ತಾಪುರ: ಕಲಬುರ್ಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ 2024-25 ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಿತ್ತಾಪುರ ಕಬ್ಬಡ್ಡಿ ತಂಡ ಸತತವಾಗಿ ಮೂರನೇ ಬಾರಿಗೆ ಜಯಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಕಬ್ಬಡ್ಡಿ ತರಬೇತುದಾರರು ಹಾಗೂ ಚಿತ್ತಾಪೂರ ಕ್ರೀಡಾಂಗಣದ ವ್ಯವಸ್ಥಾಪಕ ಮರೇಪ್ಪ ಬೊಮ್ಮನಳ್ಳಿಕ‌ರ್ ತಿಳಿಸಿದ್ದಾರೆ.

ಚಿತ್ತಾಪೂರ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ನಾಗಾವಿ ನಾಡಿನ ಕೀರ್ತಿ ತರುತ್ತಿರುವ ಎಲ್ಲಾ ಕಬ್ಬಡ್ಡಿ ತಂಡ ಆಟಗಾರರಿಗೆ ತುಂಬ ಧನ್ಯವಾದಗಳು ಸಲ್ಲಿಸಿ ಮುಂದೆ ರಾಜ್ಯ ಮಟ್ಟದಲ್ಲಿ ಗೆದ್ದು ಬರಲಿ ಎಂದು ಹೇಳಿದರು.

ಕ್ರೀಡಾ ಪಟುಗಳಾದ ಶರಣು, ಭರತ್, ಮೌನೇಶ್‌, ಹಾಲಪ್ಪ, ಬಸವರಾಜ, ಆನಂದ, ರಾಜು, ದುರಾಜ್, ವಿಜಯ, ಭೀಮು, ಸದಾಶಿವ ಸೇರಿದಂತೆ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.