ಭಜರಂಗದಳ, ಹಿಂದೂ ಸಮಾಜದ ಕವಚ: ಮಣಿಕಂಠ ರಾಠೋಡ.
ಚಿತ್ತಾಪೂರ: ಭಜರಂಗದಳ ಎನ್ನುವುದು ಸಮಾಜ ವಿರೋಧಿ ಸಂಘಟನೆಯಲ್ಲ. ಗೋಮಾತೆಯ ಹಿತಕ್ಕಾಗಿ, ಹಿಂದು ಸೋದರಿಯರ ಮಾನ ಸಮ್ಮಾನ ಸಂರಕ್ಷಣೆಗಾಗಿ ಎಂಥ ತ್ಯಾಗಕ್ಕೂ ಸಿದ್ದವಾಗಿರುವ ಕಾರ್ಯಕರ್ತರ ಪಡೆ, ಹಿಂದೂ ಸಮಾಜದ ಕವಚವಿದ್ದಂತೆ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿದರು.
ತಾಲ್ಲೂಕಿನ ಯರಗಲ್, ಮರಗೋಳ, ದಂಡೋತಿ, ತನಸನಹಳ್ಳಿ (ಟಿ), ಗ್ರಾಮದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಹಿಂದೂ ವಿರೋಧಿ ನಿಲುವಿಗೆ ಧಿಕ್ಕಾರ.
ಬಜರಂಗ ದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಹೇಳುತ್ತದೆ ಈ ನಿಲುವು ನೋಡಿದ್ರೆ ನೀವು ಹಿಂದೂ ದ್ರೋಹಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಡಿ ಎಂದರು.
ನಾನು ಗೆಲ್ಲಲಿ ಬಿಡಲಿ ನಾನು ನಿಮ್ಮ ಕ್ಷೇತ್ರದ ಸಲುವಾಗಿ ಸೇವೆ ಸಲ್ಲಿಸುವೆ.
ಮರಗೋಳ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದಬ್ಬಾಳಿಕೆ ಜಾಸ್ತಿಯಾಗಿದೆ ನಾನು ಗಣೇಶನ ದೇವಸ್ಥಾನಕ್ಕೆ ಆಶೀರ್ವಾದ ಪಡೆಯಲು ಬರುವೆ ಎಂದರೆ ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಮಣಿಕಂಠಗೆ ಕರಿಸಬೇಡಿ ಎಂದು ದಬ್ಬಾಳಿಕೆ ಮಾಡುತ್ತಾರೆ. ಈ ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ಮಾತ್ತು ಹೇಳುವೇ ನಮ್ಮ ಬಿಜೆಪಿ ಪಕ್ಷ ಚಿತ್ತಾಪುರನಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಆಗ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ತಿರುಗೇಟು ನೀಡಿದರು.
ಕ್ಷೇತ್ರದ ಯಾವುದೇ ಗ್ರಾಮದ ಸಮಸ್ಯೆ ಇರಲಿ ಸಂಬಂಧಿಸಿದ ಅಧಿಕಾರಿಗಳಿಗೆ ನಿಮ್ಮ ಗ್ರಾಮಕ್ಕೆ ಕರೆಸಿ ಸಮಸ್ಯೆಗೆ ಪರಿಹಾರ ಕೋಡಿಸುವ ಪ್ರಯತ್ನ ಮಾಡುವೆ. ಮೇ,10ಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ನನ್ನಗೆ ಆಶೀರ್ವಾದ ಮಾಡಿ ಎಂದು ಜನರಲ್ಲಿ ಕೈ ಮುಗಿದರು.
ಈ ಸಂಬಂಧದಲ್ಲಿ ಜಾರ್ಖಂಡ್ ಸಂಸದ ಅದಿತ್ಯಸಾಹು ಸಿಂಗ್, ಮುಕುಂದ ದೇಶಪಾಂಡೆ, ಶಶಿಧರ ಸುಗೂರ, ಶಶಿಕಲಾ ಟೆಂಗಳಿ, ಮಲ್ಲಿಕಾರ್ಜುನ ಎಮ್ಮೆನೋರ, ರಾಮದಾಸ ಚವ್ಹಾಣ್, ತಮ್ಮಣ್ಣ ಡಿಗ್ಗಿ, ಸೇರಿದಂತೆ ಇತರರು ಇದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ