ಪ್ರೀಯಾಂಕ್ ಖರ್ಗೆ ಸಚಿವ ಸ್ಥಾನಕ್ಕಾಗಿ ಹರಕೆ ಈಡೇರಿಸಿದ ಅಭಿಮಾನಿ.

ಚಿತ್ತಾಪೂರ: ಮೀಸಲು ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರಿಯಾಂಕ್ ಖರ್ಗೆ ಗೆಲುವಿಗೆ ಹಾಗೂ ಸಚಿವ ಸ್ಥಾನಕ್ಕೆ ಹೇಳವನಕೇರಿ ಗ್ರಾಮದ ಅಭಿಮಾನಿ ಹಾಗೂ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಸಲಹ ಸಮಿತಿ ಸದಸ್ಯ ತಿಪ್ಪಣ್ಣ ರಾಮಣ್ಣ ಹೆಳವ ಅವರು ಮಂಗಳವಾರ ದೇವರಿಗೆ ಹರಕೆ ತಿರಿಸಿದ್ದಾರೆ.

ತೀವ್ರ ಜಿದ್ದಜಿದ್ದಿನ ಕ್ಷೇತ್ರವಾಗಿದ್ದ ಚಿತ್ತಾಪೂರ ಮತಕ್ಷೇತ್ರದ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳನ್ನು ಪಡೆದು ಗೆಲವು ಸಾಧಿಸಲೆಂದು ಹಾಗೂ ನೂತನ ಸರಕಾರದಲ್ಲಿ ಸಚಿವ ಸ್ಥಾನ ಸಿಗಲೆಂದು ಶ್ರೀ ನಾಗಾವಿ ಯಲ್ಲಮ್ಮ ದೇವಿ, ಯನಾಗುಂದಿ ಮಾತಾ ಮಣಿಕೇಶ್ವರಿ, ಯನಾಗುಂದಿ ಮೌಲಾಲಿ ಮುತ್ಯಾ, ಕಾನಕುರ್ತಿ ಶ್ರೀ ಯಲ್ಲಮ್ಮ ದೇವಿ, ಹಾಗೂ ಶ್ರೀ ಪರಶುರಾಮ ದೇವರಿಗೆ ಪ್ರತಿ ದೇವರಿಗೆ ಐದು ಟೆಂಗಿನಕಾಯಿ ಒಡಿಯುವ ಹರಿಕೆ ಮಾಡಿದ್ದರು.

ನೂತನ ಸರಕಾರದಲ್ಲಿ ಗ್ರಾಮೀಣ ಪಂಚಾಯತ ರಾಜಾ ಇಲಾಖೆ ಸಚಿವರಾಗಿದ್ದಕ್ಕೆ ಅಭಿಮಾನಿಯು ಖುಷಿಯಿಂದ ಮಂಗಳವಾರ ಎಲ್ಲಾ ದೇವರಿಗೆ ಭೇಟಿ ನೀಡಿ ದೇವರ ಹರಿಕೆ ತಿರಿಸಿದ್ದರು.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.