ಸಮಾಜ ಸೇವೆ ನೋಡಿ ಮತ ಹಾಕಿ.

ಚಿತ್ತಾಪೂರ: ಕ್ಷೇತ್ರದಲ್ಲಿ ಒಂದು ವರ್ಷದಿಂದ ಸಮಾಜ ಸೇವೆ ಮಾಡುತ್ತಾ ಇರುವೆ ಈ ಸಮಾಜ ಸೇವೆ ನೋಡಿ ನನ್ನಗೆ ಮತ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮತದಾರರಲ್ಲಿ ಮನವಿ ಮಾಡಿದರು.

ತಾಲ್ಲೂಕಿನ ಚಾಮನೂರ, ಕಡಬೂರ್, ಕುಲಕಂದ, ಮಳಗ, ತುನ್ನೂರ, ಬನ್ನಟ್ಟಿ, ಕುಂಬಾರ ಹಳ್ಳಿ, ನಾಲವಾರ ಸ್ಟೇಷನ್, ಸ್ಟೇಷನ್ ತಾಂಡಾ, ಸೂಗುರ, ಸೂಗುರ ತಾಂಡಾದಲ್ಲಿ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಾನು ಯಾವುದೇ ಉನ್ನತ ಹುದ್ದೆಯಲ್ಲಿ ಇಲ್ಲಾ ಶಾಸಕನು ಇಲ್ಲಾ ಆದರೂ ನಾನು ಕ್ಷೇತ್ರದಲ್ಲಿ ನನ್ನ ವೈಯಕ್ತಿಕ ಹಣದಿಂದ ನಿಮ್ಮೆಲ್ಲರ ಸೇವೆ ಮಾಡುತ್ತಿರುವೆ ಮುಂದೆಯೂ ಮಾಡುವೇ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರು ನನ್ನ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದರೆ ಅದು ಸತ್ಯಕ್ಕೆ ದೂರವಾಗಿದೆ. ನಾನು ಒಂದು ವೇಳೆ ಕಾನೂನಿನ ಅಡಿಯಲ್ಲಿ ತಪ್ಪಿತಸ್ಥ ಆಗಿದ್ದಾರೆ ಕಾನೂನು ಈಗಾಗಲೇ ನನ್ನ ಶಿಕ್ಷೇ ನೀಡುತ್ತಿತ್ತು ಅವರು ಹೇಳುವ ಮಾತ್ತು ಯಾರು ನಂಬಬೇಡಿ ಮತಗಳು ಸೆಳೆಯಲು ಇದು ಒಂದು ಕುತುಂತ್ರವಾಗಿದೆ ಎಂದರು.

ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡದೆ ಬಿಜೆಪಿ ಪಕ್ಷಕ್ಕೆ ಬೆಂಬಲಸಿ ನನ್ನಗೆ ಗೆಲ್ಲಿಸಿ, ನಾವು ಹಿಂದು ಧರ್ಮದ ಪರವಾಗಿದ್ದೆವೆ ಅವರು ಜಾತಿ-ಜಾತಿಗಳ ಮಧ್ಯ ಜಗಳ ಹಚ್ಚುವರು ಇದ್ದರೆ ಎಂದು ಹೇಳಿದರು.

ಇದೇ ವೇಳೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಹಾಗೂ ಇತರ ಪಕ್ಷವನ್ನು ತೊರೆದು ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಹಾಗೂ ಮಣಿಕಂಠ ರಾಠೋಡ ಅವರ ಸಮಾಜ ಸೇವೆ ನೋಡಿ ಮಾಜಿ ಜಿಪಂ ಸದಸ್ಯ ಇಬ್ರಾಹಿಂ ಪಟೇಲ,  ಮಾಜಿ ತಾಪಂ ಸದಸ್ಯ ಬಸವರಾಜ ಲೋಕನಳ್ಳಿ, ಅವರ ಮುಂದಾಳತ್ವದಲ್ಲಿ ನೂರಾರು ಜನರು ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಜಾರ್ಖಂಡ್ ಸಂಸದ ಆದಿತ್ಯಸಾಹು ಸಿಂಗ್, ಮುಕುಂದ ದೇಶಪಾಂಡೆ, ಶಶಿಧರ ಸುಗೂರ, ನಿಂಗಾರೆಡ್ಢಿ ಭಾಸರೆಡ್ಡಿ, ಸುರೇಶ ರಾಠೋಡ್, ವಿಠ್ಠಲ ನಾಯಕ, ಸೇರಿದಂತೆ ಇತರರು ಇದ್ದರು.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.