ಚಿತ್ತಾಪುರ ಜನರ ಚಿತ್ತ ಮಣಿಕಂಠನತ್ತ ಇರಲಿ: ಸಿಎಂ ಬೊಮ್ಮಾಯಿ.



  ಖರ್ಗೆ ಕ್ಷೇತ್ರದಲ್ಲಿ ಸಿಎಂ  ಬೊಮ್ಮಾಯಿ       ಭರ್ಜರಿ ರೋಡ್ ಶೋ.

ಚಿತ್ತಾಪುರ: ಇಲ್ಲಿ ನಿಮ್ಮೆಲ್ಲರ ಪ್ರೋತ್ಸಾಹ ನೋಡಿದರೆ ನನಗನಿಸುತ್ತದೆ ನಿಮ್ಮೆಲ್ಲರ ಚಿತ್ತ ಮಣಿಕಂಠನತ್ತ ಇರಲಿ. ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಿಂದ ಪ್ರಮುಖ ಬೀದಿಯಲ್ಲಿ ರೋಡ್ ಶೋ ಬಂದು ಭುವನೇಶ್ವರಿ ವೃತ್ತದಲ್ಲಿ ಮಾತನಾಡಿದ ಅವರು ನಾನು ಮುಖ್ಯಮಂತ್ರಿ ಆದ ಮೇಲೆ ಅಭಿವೃದ್ಧಿಗೆ ಸಾವಿರಾರು ಕೋಟಿ ಬಿಡುಗಡೆ ಮಾಡಿರುವೆ ಅದರಲ್ಲೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5 ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದೇನೆ. ಅದೇ ಕಾಂಗ್ರೆಸ್ ಸರ್ಕಾರ ಇದ್ದಾಗ ಒಂದು ಕೋಟಿ. ನೀಡಿದೆ ನೀವೇ ವಿಚಾರ ಮಾಡಿ ಎಂದು ಹೇಳಿದರು.
ಕಾಂಗ್ರೆಸ್ ನವರು ಮತದಾರರಿಗೆ ಗ್ಯಾರಂಟಿಗಳನ್ನು ನೀಡಿದ್ದಾರೆ ಆದರೆ ಆ ಗ್ಯಾರೆಂಟಿಗಳು ಮೇ ಹತ್ತರವರೆಗೆ ಮಾತ್ರ ಅವರ ಗ್ಯಾರಂಟಿಗಳು ನಂತರ ಗಳಗಂಟಿ ಗಳಗಂಟಿ ಎಂದು ಟೀಕೆ ಮಾಡಿದರು. ಚಿತ್ತಾಪುರ ನಲ್ಲಿ ಕಾಂಗ್ರೆಸ್ ಏನ್ ಗ್ಯಾರಂಟಿ ನೀಡಿದೆ ಅದಕ್ಕೆ ಪ್ರಧಾನಿಯವರು ಹೇಳಿದ್ದಾರೆ ಬ್ರಷ್ಟಾಚಾರವೇ ಅವರ ಗ್ಯಾರೆಂಟಿ ಅದು ಇನ್ನು ಮುಂದೆ ನಿಂತು ಹೋಗುತ್ತದೆ. ಮೇ 13ಕ್ಕೆ ಚಿತ್ತಾಪುರದಲ್ಲಿ ಗ್ಯಾರಂಟಿ ಇರುವುದು ಮಣಿಕಂಠ ರಾಠೋಡ್ ಒಬ್ಬನೇ ಎಂದು ಹೇಳಿದರು.

ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಮೋದಿ ಸರ್ಕಾರ ರೈತರಿಗೆ 
ಕಿಸಾನ್ ಸನ್ಮಾನ ಯೋಜನೆ,  ಪ್ರಧಾನ ಮಂತ್ರಿ ಅವಾಸ್ ಯೋಜನೆ, ಆರೋಗ್ಯಕ್ಕೆ ಆಯುಷ್ಮಾನ್ ಕಾರ್ಡ್, ನಮ್ಮ ರಾಜ್ಯ ಸರ್ಕಾರ ರೈತರಿಗೆ ವಿದ್ಯಾನಿಧಿ ಕೊಟ್ಟಿದೆ, ರೈತರಿಗೆ ಯಶಸ್ವಿನಿ ಯೋಜನೆ ತಂದಿದ್ದೇವೆ, ಕಳೆದ ವರ್ಷ ಡಿಜಲ್ ಸಬ್ಸಿಡಿ ಕೊಟ್ಟಿದ್ದೇವೆ, ಈ ವರ್ಷ ಐದು ಲಕ್ಷದವರೆಗೆ ಶೂನ್ಯ ಬಗ್ಗೆ ಸಾಲ ಕೊಡ್ತಾ ಇದೀವಿ ದಿನ- ದಲಿತರಿಗೆ 75 ಯೂನಿಟ್ ಪುಕ್ಕಟೆ ಕೊಡ್ತಾ ಇದ್ದೇವೆ. ಹೆಣ್ಣು ಮಕ್ಕಳಿಗೆ ಶ್ರೀ ಸಾಮರ್ಥ್ಯ ಯೋಜನೆ, ಮೂರು ಲಕ್ಷ ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡ್ತಾ ಇದ್ದೇವೆ, ಸ್ವಾಮಿ ವಿವೇಕಾನಂದ ಯೋಜನೆಯಲ್ಲಿ ಯುವಕರಿಗಾಗಿ ಮೂರು ಲಕ್ಷ ಉದ್ಯೋಗವನ್ನು ಕೊಡ್ತಾ ಇದ್ದೇವೆ, ವಿದ್ಯಾರ್ಥಿಗಳಿಗೆ ಡಿಗ್ರಿವರೆಗೆ ಉಚಿತ ಶಿಕ್ಷಣ, ವಿದ್ಯಾರ್ಥಿಯರಿಗೆ ಉಚಿತ ಬಸ್ ಪ್ರಯಾಣ, ಹೀಗೆ ಬಿಜೆಪಿ ಸರ್ಕಾರ ಕಂಕಣ ಬದ್ಧವಾಗಿ ಕೆಲಸ ಮಾಡುತ್ತಿದೆ.

ಅಣ್ಣ ಬಸವಣ್ಣನ ಹಾದಿಯಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ. ಅವರಿಗೂ ಸಮಪಾಲು ಸರ್ವರಿಗೂ ಸಮ ಬಾಳು. ಸಬ್ ಕೆ ಸಾಥ್ ಸಬ್ ಕಾ ವಿಕಾಸ್. ನಿಟ್ಟಿನಲ್ಲಿ ನಾವು ನಡೆಯುತ್ತಿದ್ದೇವೆ. ಕರ್ನಾಟಕದಿಂದ ನವ ಕರ್ನಾಟಕ ಭಾರತ ನಿರ್ಮಾಣವಾಗಬೇಕಾದರೆ ಚಿತ್ತಾಪುರ ನಲ್ಲಿ ಕಮಲ ಅರಳಬೇಕು ಎಂದರು.

ಭಾರತ ದೇಶವನ್ನು ಸ್ವಚ್ಛ ಭಾರತ ಮಾಡಲು ಹೊರಟಿರುವ ನರೇಂದ್ರ ಮೋದಿಯವರಿಗೆ ನಾವು ನೀವೆಲ್ಲರೂ ಶಕ್ತಿ ತುಂಬಬೇಕು. ಎಲ್ಲರೂ ಕೈಯಲ್ಲಿ ಕೇಸರಿ ಶಾಲು ಹಿಡಿಯಿರಿ ಈ ಕೇಸರಿ ಶಾಲು ನಮ್ಮ ಹಿಂದುತ್ವದ ಒಗ್ಗಟ್ಟು.
ಜೊತೆಗೆ ಚಿತ್ತಾಪುರ ನಲ್ಲಿ ಎಲ್ಲಾ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಮಣಿಕಂಠ ರಾಠೋಡ್ ಅವರನ್ನು ಗೆಲ್ಲಿಸಿ ಎಂದು ಹೇಳಿದರು. 

- ಶೃತಿ, ಚಲನಚಿತ್ರ ನಟಿ.


 ರಾಜ್ಯದ ಮುಖ್ಯಮಂತ್ರಿಗಳು ಬಸವರಾಜ್ ಬೊಮ್ಮಾಯಿ ಅವರು ಚಿತ್ತಾಪುರಗೆ ಬಂದು ನನಗೆ ಆಶೀರ್ವಾದ ಮಾಡಿದ್ದಾರೆ. ಜೊತೆಗೆ ಇಲ್ಲಿ ಸೇರಿದ ಸಾವಿರಾರು ಕಾರ್ಯಕರ್ತರ ಆಶೀರ್ವಾದ ನನ್ನ ಮೇಲಿದೆ ಹೀಗಾಗಿ ನನಗೆ ಈ ಬಾರಿ 50, ಸಾವಿರ ಅಧಿಕ ಮತಗಳಿಂದ ಆರಿಸಿ ತರಬೇಕು ಎಂದು ಮನವಿ ಮಾಡಿದರು.

- ಮಣಿಕಂಠ ರಾಠೋಡ್.
ಬಿಜೆಪಿ ಅಭ್ಯರ್ಥಿ ಚಿತ್ತಾಪುರ.

ಈ ಸಂದರ್ಭದಲ್ಲಿ ರಾಜುಗೌಡ, ಎನ್ ರವಿ ಕುಮಾರ್, ಬಸವರಾಜ್ ಬೆಣ್ಣೂರಕರ್, ಸೇರಿದಂತೆ ಸಾವಿರಾರು ಕಾರ್ಯಕರ್ತರು ಇತರರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.