ಬುಧವಾರ, ಏಪ್ರಿಲ್ 26, 2023

ದೇಶದ ಸುರಕ್ಷತೆಯಲ್ಲಿ ಮೊದಿ ಸೇವೆ ಅಗಾಧ: ಎಮ್ಮೆನೋರ.

ಚಿತ್ತಾಪೂರ: ಭಾರತೀಯ ಜನಾತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಬಗ್ಗೆ ಯೋಚಿಸಿದಾಗ ಬಿಜೆಪಿ ಪಕ್ಷ ವಿಭಿನ್ನವಾದ ಪಕ್ಷ, ಏಕೆಂದರೆ ದೇಶದ ಪ್ರಧಾನಿ ನರೇಂದ್ರ ಮೊದಿ ಅವರು ದೇಶ ಅಭಿವೃದ್ಧಿ, ದೇಶ ಸುರಕ್ಷತೆಗಾಗಿ ಹಗಲು ಇರುಳು ಅನ್ನದೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ಹೇಳಿದರು.

ತಾಲ್ಲೂಕಿನ ತರ್ಕಸಪೇಟನ ಪ್ರಚಾರದಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷ ಸಣ್ಣ-ಸಣ್ಣ ಸಮುದಾಯಗಳು ಸಹ ಸಮಾಜದ  ಮುಖ್ಯವಾಹಿನಿಗೆ ಬರಬೇಕೆಂದು ಅನೇಕ ನಿಗಮ ಮಂಡಳಿಗಳನ್ನು ಮಾಡಿದ್ದಾರೆ. ದೇಶದ ಪ್ರಗತಿಗಾಗಿ ಹಗಲು ರಾತ್ರಿ ಎನ್ನದೆ ದೇಶದ ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿ ಅವರು ಜನ ಸೇವೆಯಲ್ಲಿ ತಮ್ಮ‌ನ್ನು ತಾವು ತೊಡಗಿಸಿಕೊಂಡಿದ್ದಾರೆ. ಪಿಎಂ ಕಿಸಾನ್ ಯೋಜನೆ ಅಡ್ಡಿಯಲ್ಲಿ ರೈತರಿಗೆ ನೇರವಾಗಿ 24 ಲಕ್ಷ ಕೋಟಿ ರೂ.ಹಣ ಜಮಾಡುವ ಕೆಲಸ ಮಾಡಿದ್ದಾರೆ. 

ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ  ಕೆಲಸ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಆದ್ರೆ ಹೇಳಿಕೊಳ್ಳುವಷ್ಟು ಕೆಲಸ ಆಗಿಲ್ಲ. ರೈತರ ಸಲುವಾಗಿ ಹಲವು ಕೆರೆ ತುಂಬುವ ಬೇಡಿಕೆಯನ್ನು ಕಳೆದ ಹತ್ತು ವರ್ಷದಿಂದ ಬಹು ಮುಖ್ಯ ಬೇಡಿಕೆಯಾಗಿತ್ತು. ಅದರಿಂದ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿತು. ಆದ್ರೆ ಇನ್ನೂ ಆ ಬೇಡಿಕೆ  ಈಡೇರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು 

ಒಂದು ಸಲ ಬಿಜೆಪಿ ಪಕ್ಷದ ಅಭ್ಯರ್ಥಿ ಮಣಿಕಂಠ ರಾಠೋಡ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಬಹುಮತಗಳ ಅಂತರದಲ್ಲಿ ಗೆಲ್ಲಿಸೋಣ ಎಂದು ಜನರಲ್ಲಿ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮಾತನಾಡಿ ತರ್ಕಸಪೇಟ ಗ್ರಾಮ ನನಗೆ ಹೊಸದೆನಲ್ಲ ಆದ್ರೆ ಇಷ್ಟೋಂದು ಜನ ಸೇರುತ್ತಾರೆ ಎಂದು ನಿರೀಕ್ಷೆ ಮಾಡಿಲ್ಲ, ಈ ಪ್ರೀತಿ ಮತದಾನ ದಿನದವರೆಗೆ ಇರಲಿ ಎಂದು ಜನರಲ್ಲಿ ಕೈ ಮುಗಿದು ಮನವಿ ಮಾಡಿದ್ದಾರೆ.

 ಈ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳ ಹಾಗೂ ಬೇಡಿಕೆಗಳು ನೀಡಿದ್ದೀರಿ ಅವುಗಳಲ್ಲಿ ವಿಶೇಷವಾಗಿ ಬಸವೇಶ್ವರ ಮೂರ್ತಿ, ಗ್ರಾಮ ಪಂಚಾಯತ್ ಮತ್ತು ಮಹಿಳೆಯರ ಶೌಚಾಲಯ ಬಹುದಿನಗಳ ಬೇಡಿಕೆಯಾಗಿದೆ. ಆ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ. ನಿಮ್ಮ ಕಷ್ಟ ನನಗೆ ಅರ್ಥವಾಗುತ್ತೆ, ಈ ಸಮಸ್ಯೆ ಬಗೆಹರಿಸಲು, ನೀವೂ ನನ್ನಗೆ ಮತದಾನ ದಿನ ಮತ ನೀಡಿ ಗೆಲ್ಲಿಸಿ ಎಂದರು.

ಕಾಂಗ್ರೆಸ್,ಜೆಡಿಎಸ್ ಹಾಗೂ ಇತರ ಪಕ್ಷ ತೊರೆದು ತರ್ಕಸಪೇಟನ ನಾರಾರು ಯುವಕರ ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ನಿಂಗಾರೆಡ್ಡಿ ಬಾಸರೆಡ್ಡಿ, ಭೀಮರಡ್ಡಿ ಕುರಾಳ,  ಸುರೇಶ ರಾಠೋಡ್ ಕವಿತಾ ಚವ್ಹಾಣ್, ಶಿವಕುಮಾರ ಸುಣಗಾರ, ಮಲ್ಲಿಕಾರ್ಜುನ ಅಅಲ್ಲೂರಕರ್, ಗೌಡ, ನಂದರೆಡ್ಡಿ ಗೌಡ, ಶಾಂತಯ್ಯ ಗುತ್ತೇದಾರ್ ನಾಗೇಶ ಪಂಚಾಳ, ವೆಂಕಟರೆಡ್ಡಿ ಗೌಡ, ಬಲವಂತ ದೇವರಳ್ಳಿ, ಮಲ್ಲಿಕಾರ್ಜುನ ಕುಂಬಾರ, ಈಶಪ್ಪ, ಬಸವರಾಜ ಕುಂಬಾರ ಸೇರಿದಂತೆ ಇತರರು ಇದ್ದರು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...