ಚಿತ್ತಾಪುರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಯಾನಗುಂದಿಯ ಶ್ರೀ ಮಾತಾ ಮಾಣಿಕೇಶ್ವರಿ ದೇವಿಯ ದರ್ಶನಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಭಕ್ತಾದಿಗಳಿಗೆ ತಾಲೂಕು ಕೋಲಿ ಸಮಾಜದ ಯುವ ಘಟಕದ ವತಿಯಿಂದ ಹಣ್ಣು-ಹಂಪಲು ಹಾಗೂ ಕುಡಿಯುವ ನೀರನ್ನು ವಿತರಿಸಲಾಯಿತು.
ಚಿತ್ತಾಪುರ ಮತಕ್ಷೇತ್ರದ ಬೆಣ್ಣೂರ್ (ಬಿ) ಗ್ರಾಮದ ಮಾತಾ ಮಾಣಿಕೇಶ್ವರಿಯ ಭಕ್ತರು ಯಾನಗುಂದಿ ಜಾತ್ರಾ ಮಹೋತ್ಸವದ ನಿಮಿತ್ತ ಪಾದಯಾತ್ರೆ ಕೈಗೊಂಡಿದ್ದರು. ಈ ವೇಳೆ ಮಾರ್ಗಮಧ್ಯೆ ತಾಲೂಕು ಕೋಲಿ ಸಮಾಜದ ಯುವ ಘಟಕದ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ನೇತೃತ್ವದಲ್ಲಿ ಭಕ್ತರಿಗೆ ಉಪಹಾರ ಹಾಗೂ ಪಾನೀಯ ವ್ಯವಸ್ಥೆ ಮಾಡುವ ಮೂಲಕ ಸೇವೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ್ ಹೋಳಿಕಟ್ಟಿ ರವರು ಮಾತನಾಡಿ ಅವ "ಶಿವನ ಆರಾಧನೆಯ ಪವಿತ್ರ ಮಾಸದಲ್ಲಿ ಮಾತಾ ಮಾಣಿಕೇಶ್ವರಿಯ ದರ್ಶನಕ್ಕೆ ನೂರಾರು ಕಿಲೋಮೀಟರ್ ಪಾದಯಾತ್ರೆ ಬೆಳೆಸುವ ಭಕ್ತರ ಶ್ರದ್ಧೆ ಅಪಾರವಾದದ್ದು. ಇಂತಹ ಭಕ್ತಾದಿಗಳಿಗೆ ಅಲ್ಪಪ್ರಮಾಣದ ಸೇವೆಯನ್ನು ಸಲ್ಲಿಸುವುದು ನಮ್ಮ ಸಮಾಜದ ಭಾಗ್ಯವಾಗಿದೆ. ಪಾದಯಾತ್ರಿಗಳ ಹಸಿವು-ನೀರಿಕೆ ನೀಗಿಸುವ ಮೂಲಕ ಅವರ ಪವಿತ್ರ ಕಾರ್ಯಕ್ಕೆ ಕೈಜೋಡಿಸುವುದು ನಮ್ಮ ಉದ್ದೇಶ," ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪೊಲೀಸ್ ದತ್ತು ಜಾನೆ, ಶಂಕರ್ ತಳವಾರ್, ಸಾಬಣ್ಣ ಹೋಳಿಕಟ್ಟಿ, ದೇವರಾಜ್ ತಳವಾರ್, ಕರಣಕುಮಾರ್, ರಾಜೇಶ್ ಬೆನಕನಹಳ್ಳಿ, ಬೆಳ್ಳಪ್ಪ ಇಂಗನ್ಕಲ್, ನಾಗರಾಜ್ ಮೈನಾಳ್ಕರ್, ಮಹದೇವ್ ಬೆನ್ನೂರುಕಾರ್, ಬಸವರಾಜ, ವಿಕ್ರಂಕುಮಾರ್, ಗೂಳಿ ಡಿಗ್ಗಿ, ಶಾಮರಾವ್, ಗಣೇಶ್ ಇಟಗಿ, ನಾಗರಾಜ್ ಬೋವಿ, ಸುಭಾಷ ಬೋವಿ, ಶಿವು ಸೇರಿದಂತೆ ಅನೇಕ ಭಕ್ತಾದಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ