ಶುಕ್ರವಾರ, ಫೆಬ್ರವರಿ 20, 2026

ಸಮಾಜದ ಅಂಕುಡೊಂಕು ತಿದ್ದಿದು ಸರ್ವಜ್ಞ: ನಾಗಯ್ಯ ಹೀರೆಮಠ.

ಚಿತ್ತಾಪುರ: "ತ್ರಿಪದಿ ಕವಿ ಸರ್ವಜ್ಞರು ತಮ್ಮ ಅರ್ಥಗರ್ಭಿತ ವಚನಗಳ ಮೂಲಕ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿ ಹಾಗೂ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ಸಮಾಜ ಸುಧಾರಕರು," ಎಂದು ತಹಸೀಲ್ದಾರ್ ನಾಗಯ್ಯ ಹೀರೆಮಠ ಬಣ್ಣಿಸಿದರು.

ಪಟ್ಟಣದ ಪ್ರಜಾಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 506ನೇ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿ ಮಾತನಾಡಿದ ಅವರು ಸರ್ವಜ್ಞರು ಅಂದಿನ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸಾಮಾನ್ಯ ಜನರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಜೀವನದ ಸತ್ಯಗಳನ್ನು ತಿಳಿಸಿಕೊಟ್ಟಿದ್ದಾರೆ. ಜಾತಿ, ಮತ ಎಂಬ ಭೇದವಿಲ್ಲದೆ ಸರ್ವ ಸಮಾನತೆಯನ್ನು ಸಾರಿದ ಅವರ ತ್ರಿಪದಿಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಪ್ರತಿಯೊಬ್ಬರೂ ಸರ್ವಜ್ಞರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಸುದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.
ಕುಂಬಾರ ಸಮಾಜದ ಮಾಜಿ ಅಧ್ಯಕ್ಷ ಜಗದೇವ ಎಸ್. ಕುಂಬಾರ, "ಕುಂಬಾರ ಸಮಾಜದಲ್ಲಿ ಜನಿಸಿದ ಸರ್ವಜ್ಞರು ಇಡೀ ಜಗತ್ತೇ ಮೆಚ್ಚುವಂತಹ ಸಾಹಿತ್ಯ ನೀಡಿದ್ದಾರೆ. ಮಣ್ಣಿನಿಂದ ಕುಂಭ ತಯಾರಿಸುವ ಕಲೆಯಂತೆ, ಶಬ್ದಗಳ ಮೂಲಕ ಮನುಷ್ಯನ ವ್ಯಕ್ತಿತ್ವ ರೂಪಿಸುವ ಕಾರ್ಯವನ್ನು ಅವರು ಮಾಡಿದ್ದಾರೆ. ಕುಂಬಾರ ಸಮಾಜದ ಶ್ರಮಜೀವಿಗಳಿಗೆ ಸರ್ವಜ್ಞರ ಬದುಕು ಸದಾ ಸ್ಪೂರ್ತಿ," ಎಂದರು.

ಈ ಸಂದರ್ಭದಲ್ಲಿ ಕುಂಬಾರ ಸಮಾಜದ ಮುಖಂಡರಾದ ವಿಶ್ವನಾಥ ಕುಂಬಾರ ಚಿತ್ತಾಪುರ, ಶ್ರೀಮಂತ ಕುಂಬಾರ, ಮೋಗಲಪ್ಪ ಕುಂಬಾರ, ರವಿ ಕುಂಬಾರ, ಕಾಶಿನಾಥ ಕುಂಬಾರ ಬೆಣ್ಣೂರ ಶಶಿಕುಮಾರ ಕುಂಬಾರ ರಾವೂರ, ಬೀಮರಾಯ ಕುಂಬಾರ ಭಂಕಲಗಿ, ಸೇರಿದಂತೆ ತಹಸೀಲ್ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸೂಲಹಳ್ಳಿಯಲ್ಲಿ ಅಕ್ರಮ ಡ್ರಿಲಿಂಗ್: ಜಗದೀಶ್ ಸಾಗರ ಆಕ್ರೋಶ.

ಚಿತ್ತಾಪುರ: ತಾಲೂಕಿನ ಸೂಲಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಅವರಿಗೆ ಯಾವುದೇ ಮಾಹಿತಿ ನೀಡದೆ, ರಾತೋರಾತ್ರಿ ಅಕ್ರಮವಾಗಿ ಸುಣ್ಣದ ಕಲ್ಲು ಪತ್ತೆಗಾಗಿ ...