ನಿಮ್ಮ ಪಕ್ಷ ದಲಿತರ ಮೇಲೆ ದೌರ್ಜನ್ಯ ಮಾಡುವ ಪಕ್ಷ.

ಚಿತ್ತಾಪುರ: ಕಾಂಗ್ರೆಸ್ ಪಕ್ಷದಲ್ಲಿ ತತ್ವ ರೈತರ ರಾಜಕೀಯ, ನಡತೆಯಿಲ್ಲದು, ಆತ್ಮಸಾಕ್ಷಿಯಿಲ್ಲ, ನೈತಿಕತೆಯಿಲ್ಲ ಮಾನವೀಯತೆ ಇಲ್ಲಾ, ದೇಶದ ಅಭಿವೃದ್ಧಿ ಮಾಡದೇ ಇರುವ ಪಕ್ಷ ಹೀಗಾಗಿ ಮತದಾರರು, ಕಾರ್ಯಕರ್ತರು ತಮ್ಮ ಪಕ್ಷವನ್ನು ಕೈಬಿಟ್ಟಿದ್ದಾರೆ. ಜೊತೆಗೆ ನಿಮ್ಮ ಪಕ್ಷ ದೀನ ದಲಿತರ ಮೇಲೆ ದೌರ್ಜನ್ಯ ಮಾಡುವ ಪಕ್ಷವಾಗಿದೆ ಎಂದು ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ಸುರೇಶ್ ರಾಠೋಡ್ ಹೇಳಿದರು.

ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿದ ಅವರು ಶಾಸಕ ಪ್ರಿಯಾಂಕ ಖರ್ಗೆಜಿ ತಾವು ಒಬ್ಬ ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಗುಂಡಾಪಡೆಯಿಂದ ದಲಿತ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸುವುದು ಅಥವಾ ಮಾಡುವುದು ಎಷ್ಟರ ಮಟ್ಟಿಗೆ ಸರಿ ಈ ಕ್ಷೇತ್ರವು ಮೀಸಲಾತಿ ಕ್ಷೇತ್ರವಾಗಿರುವುದರಿಂದ ಇಲ್ಲಿ ಎಲ್ಲಾ ದಲಿತರಿಗೂ ಕೂಡ ರಾಜಕೀಯದಲ್ಲಿ ಸಕ್ರಿಯವಾಗಿರಲು ಹಕ್ಕಿದೆ.

ಕ್ಷೇತ್ರದಲ್ಲಿ ರಸ್ತೆಗಳು ಅದಗೆಟ್ಟಿದರಿಂದ ದಿನಕ್ಕೊಂದು ಅಪಘಾತ ಸಂಭವಿಸುತ್ತಿವೆ, ನೀರಿನ ಸಮಸ್ಯೆಯಿಂದ ಜನರು ಪರದಾಡುತ್ತಿದ್ದಾರೆ, ಬೀದಿ ದೀಪಗಳಿಲ್ಲದೆ ರಾತ್ರಿಯಲ್ಲಿ ಜನರಿಗೆ ತಿರುಗಾಡುವುದು ಕಷ್ಟವಾಗಿದೆ, ಯುವಕರು ಕೆಲಸವಿಲ್ಲದೆ ಕ್ಷೇತ್ರದಲ್ಲಿ ಪರದಾಡುತ್ತಿದ್ದಾರೆ. ಇವುಗಳ ಕಡೆ ಮೊದಲು ಗಮನ ಹರಿಸಲು ಹೇಳಿದರು.

ಅದು ಬಿಟ್ಟು ಪೆಸಿಎಂ  ಸ್ಟಿಕರ್ ಹಚ್ಚುವುದು, ಎಂಪಿ ಕಾಣೆಯಾಗಿದ್ದಾರೆ ಅಂತ ಹೇಳುವುದು ನಿಮ್ಮದು ಸರಿಯಾದ ಉತ್ತರ ನಾವು ನಿಮ್ಮ ವಿರುದ್ಧ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಹಚ್ಚಿದ್ದು ತಪ್ಪೇ ಎಂದು ಪ್ರಶ್ನಿಶಿಸಿದರು.

ನಾನು ಸವಾಲ್ ಹಾಕುತ್ತೇನೆ ತಾಕತ್ತು, ದಮ್ಮು ಇದ್ದರೆ ಅದೇನು ಮಾಡುತ್ತೀರಾ ಮಾಡಿಕೊಳ್ಳಿ. ನಾವು ಇದೇ ಕ್ಷೇತ್ರದಲ್ಲಿ ವಾಸವಾಗಿದ್ದೇವೆ ನಮ್ಮ ಕಾರ್ಯಕರ್ತರ ಜೊತೆಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ. ನಮ್ಮ ಕಾರ್ಯಕರ್ತರು ನಮ್ಮ ಶಕ್ತಿ ನಮ್ಮ ಆಸ್ತಿ. ನಮ್ಮ ಮಾನ. ಪ್ರಾಣ ನಮ್ಮ ಕಾರ್ಯಕರ್ತರಿಗೋಸ್ಕರ ಮತ್ತು ಈ ಕ್ಷೇತ್ರದ ಮತದಾರರ ಗೋಸ್ಕರ ನಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಹೋರಾಡುತ್ತೇವೆ ಎಂದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.

ಮನೆಗಳ ಹಂಚಿಕೆ ಪ್ರಕ್ರಿಯೆ ಮುಂದೂಡಲಾಗಿದೆ

ರಾಜ್ಯೋತ್ಸವ ಪ್ರಶಸ್ತಿಗೆ ಏಳು ಜನ ಸಾಧಕರ ಆಯ್ಕೆ.

ಬಜಾಜ್ ಕಾಂಪ್ಲೆಕ್ಸ್ ನಲ್ಲಿ ಅನೈತಿಕ ಚಟುವಟಿಕೆ.

ತಾಲ್ಲೂಕು ಅಧಿಕಾರಿಗಳ ವಿರುದ್ಧ ಸಚಿವರ ಅಸಮಾಧಾನ.

ಪ್ರಯಾಗರಾಜ್ ಪವಿತ್ರ ತೀರ್ಥಸ್ಥಳ: ಕಂಬಳೇಶ್ವರ ಶ್ರೀ.

ತಹಸೀಲ್ ಕಛೇರಿಯಲ್ಲಿ ಪೋಲೀಸ ಪೇದೆ ಸಾವು.

ಮಗನ ಸಾಧನೆಗೆ ತಂದೆ-ತಾಯಿ ಮೆಚ್ಚುಗೆ.