ಸನ್ನತಿ ಅಭಿವೃದ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಮಾಡಲು ಮನವಿ.
ಚಿತ್ತಾಪುರ: ತಾಲೂಕಿನ ಸನ್ನತಿ ಗ್ರಾಮ ದೇಶದ ಭೂಪಟದಲ್ಲಿ ಗಮನ ಸೆಳೆದಿದೆ. ನೂರಾರು ವರ್ಷಗಳ ಬೌದ್ಧ ಇತಿಹಾಸವಿರುವ ಗ್ರಾಮ ಸನ್ನತಿ ಅಭಿವೃದ್ದಿ ಪ್ರಾಧಿಕಾರಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಅಧ್ಯಕ್ಷರಾಗಿರಬೇಕೆಂಬ ನಿಯಮ ಬದಲಿಸಿ ಬೌದ್ಧ ಅನುಯಾಯಿಗಳಿಗೆ ಅಥವಾ ಬೌದ್ಧ ಭಿಕ್ಕು ಒಬ್ಬರಿಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ. ಕಲಬುರರ್ಗಿ ಲೋಕಸಭೆ ಸದಸ್ಯ ಡಾ.ಉಮೇಶ ಜಾಧವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದರು.
ಇಡೀ ದೇಶದಲ್ಲಿಯೇ ಅಶೋಕ ಸಾಮ್ರಾಟ ನಿರ್ಮಿಸಿದ ಬೌದ್ಧ ಇತಿಹಾಸ ಹೆಚ್ಚಿನ ಭಾಗ ಸನ್ನತಿ ಎಂಬ ಹೆಗ್ಗಳಿಕೆಗೆ ಹೆಸರಾಗಿದೆ. ಭಾರತೀಯ ಪುರತತ್ವ ಇಲಾಖೆ ವತಿಯಿಂದ ಹಲವು ವರ್ಷಗಳ ಹಿಂದೆ ಉತ್ಖನನ ಮಾಡುವ ಸಂದರ್ಭದಲ್ಲಿ ಇಲ್ಲಿ ಸಕ್ಕಿರುವ ಬೌದ್ಧ ಶಾಸನ ಮತ್ತು ಶಿಲ್ಪಕಲೆಗಳು ಈ ದೇಶದ ಮೂಲ ಧರ್ಮದ ಬೌದ್ಧರ ಅಸ್ಥಿತ್ವದ ಬಗ್ಗೆ ಹಲವಾರು ಕುರುಹುಗಳು ಸಿಕ್ಕಿವೆ. ಇವನ್ನು ಗಮನಿಸಿದ ಸರಕಾರ ಆ ಸ್ಥಳವನ್ನು ಅಭಿವೃದ್ದಿ ಪಡಿಸಲು ಮತ್ತು ಸಂಶೋಧನಾ ಕೇಂದ್ರವಾಗಿಸಲು ಸನ್ನತಿ ಅಭಿವೃದ್ದಿ ಪ್ರಾಧಿಕಾರ ರಚಿಸಿದೆ. ಅದರ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವರೇ ಇರಬೇಕು ಎಂಬ ನಿಯಮ ಮಾಡಿದೆ. ಆದರೆ ಇಲ್ಲಿರುವ ಬಹುಸಂಖ್ಯಾತ ಬೌದ್ಧ ಅನುಯಾಯಿಗಳು ಇರುವುದರಿಂದ ಈ ಕೇಂದ್ರದ ಅಭಿವೃದ್ದಿಯಾಗದೇ ಇರುವುದರಿಂದ ಬೇಸರಗೊಂಡಿದ್ದಾರೆ ಎಂಬ ವಿಷಯ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ.
ಕಾರಣ ಜಿಲ್ಲಾ ಉಸ್ತುವಾರಿ ಮಂತ್ರಿಯವರು ಪ್ರಾಧಿಕಾರದ ಅಧ್ಯಕ್ಷರಾಗಿರಬೇಕೆಂಬ ನಿಯಮ ಬದಲಿಸಿ ಜಿಲ್ಲೆಯ ಬೌದ್ಧ ಅನುಯಾಯಿಗಳು ಅಥವಾ ಬೌದ್ಧ ಭಿಕ್ಕು ಒಬ್ಬರಿಗೆ ಅದರ ಜವಾಬ್ದಾರಿ ಎಂದರೆ ಅಧ್ಯಕ್ಷರಾಗಿ ನೇಮಿಸಿ ಈ ಕೇಂದ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಅವರು ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಂಡು ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ ಎಂದು ಬಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಅನೇಕ ಪ್ರಾಧಿಕಾರಗಳು ಅಸ್ತಿತ್ವದಲ್ಲಿವೇ ಆದರೆ ಆಯಾ ಸಮುದಾಯದ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿ ಅನುದಾನ ನೀಡಿ ಅಭಿವೃದ್ದಿ ಮಾಡಿದ್ದಾರೆ ಹೀಗಿರುವಾಗ ಇಲ್ಲಿನ ಸನ್ನತಿ ಅಭಿವೃದ್ದಿ ಪ್ರಾಧಿಕಾರಕ್ಕೆ ಮಾತ್ರ ಬೌದ್ಧ ಅನುಯಾಯಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಿದೆ ಜಿಲ್ಲಾ ಉಸ್ತುವಾರಿ ಮಂತ್ರಿಗೆ ಅಧ್ಯಕ್ಷ ಸ್ಥಾನ ನೀಡಿರುವುದು ಯಾವ ನ್ಯಾಯ ಇದು ಹಿಂದಿನ ಸರಕಾರ ತಪ್ಪು ಮಾಡಿದ್ದರಿಂದ ಅಲ್ಲಿನ ಅಭಿವೃದ್ದಿ ಕುಸಿತಗೊಂಡಿದೆ ಆದ್ದರಿಂದ ಕೂಡಲೇ ನಿಯಮ ಬದಲಿಸಿ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಬೆಣ್ಣೂರಕರ್ ತಿಳಿಸಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ