ಅಂಗನವಾಡಿ ಕೇಂದ್ರಕ್ಕೆ ಸಿಇಓ ಭೇಟಿ.
ಚಿತ್ತಾಪೂರ: ತಾಲ್ಲೂಕಿನ ದಂಡೋತಿ ಗ್ರಾಮದ ಅಂಗನವಾಡಿ ಕೇಂದ್ರ-5ಕ್ಕೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀರಿಶ ದಿಲೀಪ್ ಬದೋಲೆ ಭೇಟಿ ನೀಡಿ ಅಂಗನವಾಡಿಯ ಸ್ವಚ್ಛತೆ,ಶಿಸ್ತು ಕ್ರಮಬದ್ಧತೆ ನೋಡಿ ಹಾಗೂ ಖುಷಿಯಿಂದ ಮಕ್ಕಳ ಜೊತೆ ಮಾತನಾಡಿಸಿ ಕೇಂದ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಪಂ ಇಓ ನೀಲಗಂಗಾ ಬಬಲಾದ, ಸಿಡಿಪಿಓ ರಾಜಕುಮಾರ್ ರಾಠೋಡ, ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ಸಿದ್ದಣ್ಣ ಅಣಬಿ, ಹಿರಿಯ ಮುಖಂಡರಾದ ರಾಜಶೇಖರ್ ತಿಮ್ಮನಾಯಕ್ , ಮುನಿಯಪ್ಪ ಕೊಳ್ಳಿ, ಶಂಕರ್ ಕೊಳ್ಳಿ, ರಮೇಶ ಕವಡೆ ಸೇರಿದಂತೆ ಇತರರು ಇದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ