ಮಂಗಳವಾರ, ನವೆಂಬರ್ 15, 2022

ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿ ಸಾಧ್ಯ:ಗಿರೀಶ್.

ಚಿತ್ತಾಪುರ: ಸಮಾಜದಲ್ಲಿ ಎಲ್ಲಾರೂ ಕೈಜೋಡಿಸಿ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಬ್ರಾಹ್ಮಣ  ಸಮಾಜದ ತಾಲೂಕ ಅಧ್ಯಕ್ಷ ಗೀರಿಶ ಜಾನಿಬ್ ಹೇಳಿದರು.
 
 ಪಟ್ಟಣದ ರಾಘವೇಂದ್ರ ದೇವಾಸ್ಥಾನದಲ್ಲಿ ನಡೆದ ಬ್ರಾಹ್ಮಣ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹಳೆಯ ಪದಾಧಿಕಾರಿಗಳ ಬೀಳ್ಕೋಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನಾವೆಲ್ಲರು ಒಂದಾಗಿ ಸರ್ಕಾರಕ್ಕೆ ಒತ್ತಡ ಹಾಕಿದಾಗ ಮಾತ್ರ ಸರ್ಕಾರದಿಂದ ನಾವು ಸೌಲಭ್ಯವನ್ನು ಪಡೆಯಲು ಸಾಧ್ಯ, ನಮ್ಮ ಸಮಾಜದಲ್ಲಿ ಸಾಕಷ್ಟು ಜನ ಬಡವರು ಇದ್ದಾರೆ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ, ನಮ್ಮ ಸಮಾಜದಲ್ಲಿನ ಬಡತನ ರೇಖೆಕ್ಕಿಂತ ಕಡಿಮೆ ಇರುವ ಜನರನ್ನು ಮುಖ್ಯವಾಹಿನಿಗೆ ತರುವ ಕೆಲಸ ನಾವು ಎಲ್ಲಾರೂ ಕೂಡಿ ಮಾಡಬೇಕಾಗಿದೆ ಎಂದು ಹೇಳೀದರು. 

ನೂತನ ಪದಾಧಿಕಾರಿಗಳು: ಗೌರವಅಧ್ಯಕ್ಷ ದೇವಿದಾಸ ಕುಲ್ಕರ್ಣಿ, ಅಧ್ಯಕ್ಷ ಗಿರೀಶ ಜಾನಿಬ್, ಉಪಾಧ್ಯಕ್ಷ ವಿಶ್ವನಾಥ ಅಫಜಲಪುರಕರ್, ಪ್ರಧಾನ ಕಾರ್ಯದರ್ಶಿ ಅನಂತನಾಗ ದೇಶಪಾಂಡೆ, ಖಜಾಂಚಿ ಜಯಂತ ಕುಲ್ಕರ್ಣೀ, ಸಲಹಾ ಸಮತಿ ಸದಸ್ಯರಾಗಿ ಸುಧಾಕರರಾವ ಕುಲ್ಕರ್ಣಿ, ಭೀಮರಾವ ಅಫಜಲಪುರಕರ್, ಶ್ರೀಹರಿ ಭಟ್, ಗುಂಡೆರಾವ ಸರಾಫ್, ಹಣಮೇಶ ಅರ್ಚಕ, ಅಂಬ್ರೀಷ ಜಾನಿಬ್, ರಾಮರಾವ ಕುಲ್ಕರ್ಣಿ, ಗೋಪಾಲರಾವ ಅಫಜಲಪುರಕರ್, ಹಣಮಂತರಾವ ಕುಲ್ಕರ್ಣೀ, ಪ್ರದೀಪ್ ಕುಲ್ಕರ್ಣಿ, ಮಾಣಿಕರಾವ ಕುಲ್ಕರ್ಣಿ ಅವರು ಆಯ್ಕೆಯಾಗಿದ್ದಾರೆ. 

  
ಈ ಸಂದರ್ಭದಲ್ಲಿ ರವಿ ಕುಲ್ಕರ್ಣಿ, ರಾಘವೇಂದ್ರ ಜಾನಿಬ್, ರಾಮರಾವ ಕುಲ್ಕರ್ಣಿ, ಮಾಣಿಕರಾವ ಕುಲ್ಕರ್ಣಿ, ಭೀಮಶೇನರಾವ್ ಕಲ್ಕರ್ಣಿ, ಪವನ್ ಜೋಶಿ, ರಾಜು ಕುಲ್ಕರ್ಣಿ ಸಂಜೀವ ಜಾನಿಬ್, ಆನಂದ ಪಟವಾರಿ, ಪ್ರಲ್ಹಾದ್ ಕುಲ್ಕರ್ಣಿ ಗವತಮ್ ನಾಯಕ ಸೆರಿದಂತೆ ಸಮಾಜ ಬಾಂಧವರು ಹಾಗು ಮಹಿಳೆಯರು ಇದ್ದರು, ಕಾರ್ಯಕ್ರಮದಲ್ಲಿ ಲಲಿತಾ ದೇಶಪಾಂಡೆ ಪ್ರಾರ್ಥಿಸಿದರು. ರವಿ ಕುಲ್ಕರ್ಣಿ ಸ್ವಾಗತ ಕೋರಿದರು. ರಾಮಾಚಾರಿ ಅವರು ನಿರೂಪಿಸಿ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪಿಂಚಣಿ ಕಾಯ್ದೆ 2025 ರದ್ದತಿಗೆ ಆಗ್ರಹಿಸಿ ಪ್ರಧಾನಿಗೆ ಮನವಿ.

ಚಿತ್ತಾಪುರ: ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ '2025ರ ಊರ್ಜಿತಗೊಳಿಸುವಿಕೆ ಕಾಯ್ದೆ ಪಿಂಚಣಿದಾರರ ನಡುವೆ ತಾರತಮ್ಯ ಉಂಟು ಮಾಡುತ್ತಿದ್ದ...