ಶುಕ್ರವಾರ, ಮಾರ್ಚ್ 20, 2026

ವರುಣನಗರದಲ್ಲಿ ಶರಣರ ಸಂಭ್ರಮ: ಏಪ್ರಿಲ್ 7ಕ್ಕೆ ಶ್ರೀ ಶರಣಬಸವೇಶ್ವರ ಭವ್ಯ ರಥೋತ್ಸವ.

ಚಿತ್ತಾಪುರ: ಇಲ್ಲಿನ ವರುಣನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವದ ಕಳೆಗಟ್ಟಿದ್ದು, ರಥ ಪೂಜೆ ಹಾಗೂ ನೂತನ ದೀಪಸ್ತಂಭ ಉದ್ಘಾಟನೆಯೊಂದಿಗೆ ಪೂರ್ವಭಾವಿ ಸಭೆ ಅತ್ಯಂತ ಭಕ್ತಿಪೂರ್ವಕವಾಗಿ ಜರುಗಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಶ್ರೀ ಶರಣಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಸೇವಾ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

​ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಅಂಬರೀಶ್ ಸುಲೆಗಾಂವ್, "ಕಲಬುರ್ಗಿಯ ಶರಣಬಸವೇಶ್ವರ ಜಾತ್ರೆಯಷ್ಟೇ ಪವಿತ್ರವಾದ ಇತಿಹಾಸ ನಮ್ಮ ವರುಣನಗರದ ಜಾತ್ರೆಗೂ ಇದೆ. ಹಿಂದೆ ಅನೇಕ ಅಡೆತಡೆಗಳ ನಡುವೆಯೂ ಈ ಪರಂಪರೆಯನ್ನು ಉಳಿಸಿಕೊಂಡು ಬರಲಾಗಿದೆ. ಇಂದು ಶರಣರ ಕೃಪೆ ಹಾಗೂ ಭಕ್ತರ ಮತ್ತು ದಾನಿಗಳ ಉದಾರ ಮನಸ್ಸಿನಿಂದ ಕಳೆದ ಕೆಲವು ವರ್ಷಗಳಿಂದ ಈ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿರುವುದು ಸಂತಸದ ವಿಷಯ," ಎಂದರು.

​ಜಾತ್ರಾ ಮಹೋತ್ಸವದ ಅಂಗವಾಗಿ ಈ ಕೆಳಗಿನ ವಿಶೇಷ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ:
​ವಿಶ್ವವಂದ್ಯರ ಪುರಾಣ: ಮಾರ್ಚ್ 26 ರಿಂದ ಏಪ್ರಿಲ್ 6ರ ವರೆಗೆ ಪ್ರತಿದಿನ ಸಂಜೆ 7:30ಕ್ಕೆ ಅಬ್ಬೆ ತುಮಕೂರ ಸದ್ಗುರು ಶ್ರೀ ವಿಶ್ವಾರಾಧ್ಯರ ಪುರಾಣ ಪ್ರವಚನ ನಡೆಯಲಿದೆ.
​ನಾಣ್ಯಗಳ ತುಲಾಭಾರ: ಷ.ಬ್ರ ಶ್ರೀ ಶಿವಶಂಕರ ಶಿವಾಚಾರ್ಯರ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ನಿಮಿತ್ತ ಅವರಿಗೆ ನಾಣ್ಯಗಳ ಮೂಲಕ ಭಕ್ತಿಪೂರ್ವಕ ತುಲಾಭಾರ ನೆರವೇರಲಿದೆ.
​ಮಹಾ ರಥೋತ್ಸವ: ಏಪ್ರಿಲ್ 7 ರಂದು ಸಾಯಂಕಾಲ 6:30ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಶರಣಬಸವೇಶ್ವರರ ಭವ್ಯ ರಥೋತ್ಸವ ಜರುಗಲಿದೆ.
ದೀಪಸ್ತಂಭ ಉದ್ಘಾಟಿಸಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ಕಂಬಳೇಶ್ವರ ಮಠದ ಶ್ರೀಗಳಗಾದ ಸೋಮಶೇಖರ ಶಿವಾಚಾರ್ಯರು, "ವರುಣನಗರದಲ್ಲಿ ಶರಣಬಸವೇಶ್ವರ ದೇವಸ್ಥಾನವು ಇಂದು ಈ ಮಟ್ಟಕ್ಕೆ ಅಭಿವೃದ್ಧಿ ಹೊಂದಲು ಯುವ ಪೀಳಿಗೆಯ ಶ್ರಮವೇ ಕಾರಣ. ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಒಂದಾಗಿ ನಡೆಸುತ್ತಿರುವ ಈ ಧಾರ್ಮಿಕ ಕಾರ್ಯಗಳು ಸಮಾಜಕ್ಕೆ ಮಾದರಿ," ಎಂದು ಹಾರೈಸಿದರು.

​ಸಭೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನಾಗರಾಜ ಭಂಕಲಗಿ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ್ ದೇಶಮುಖ್, 2026ನೇ ಸಾಲಿನ ಜಾತ್ರಾ ಮಹೋತ್ಸವ ಅಧ್ಯಕ್ಷ ಅಶೋಕ್ ನಿಪ್ಪಾಣಿ ಸೇರಿದಂತೆ ಪ್ರಮುಖರಾದ ಆನಂದ ಪಾಟೀಲ ನರಬೂಳಿ, ಶ್ರೀಮತಿ ರಾಜೇಶ್ವರಿ ಪಾಟೀಲ್, ಶ್ರೀಮತಿ ಗಿರೀಜಾ ಪಾಟೀಲ್ ಹೆಬ್ಬಾಳ, ಶ್ರೀಮತಿ ಪ್ರಭಾ ಬೆಂಗಳೂರು, ಅನಿಲ್ ವಡ್ಡಡಗಿ, ಮಲರೆಡ್ಡಿ ಗೋಪಸೇನ್, ಜಗಣ್ಣಗೌಡ ಪಾಟೀಲ್, ಕೋಟೇಶ್ವರ ರೇಷ್ಮಿ ಹಾಗೂ ಪ್ರಸಾದ ಅವಂಟಿ, ಶ್ರಿಮಂತ ಕುಂಬಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.​ಕಾರ್ಯಕ್ರಮವನ್ನು ಬಸವರಾಜ ಹೋಟಿ ಅಚ್ಚುಕಟ್ಟಾಗಿ ನಿರೂಪಿಸಿದರೆ, ವಿಶ್ವಾರಾಧ್ಯ ಪಾಟೀಲ್ ವಂದನಾರ್ಪಣೆ ಮಾಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ರಾವೂರ್‌ನಲ್ಲಿ ಸೌಹಾರ್ದತೆಯ ಇಫ್ತಿಯಾರ್ ಕೂಟ: ಭಾವೈಕ್ಯತೆಯ ಸಂದೇಶ ಸಾರಿದ ಗ್ರಾಮಸ್ಥರು

​ ರಾವೂರ್: ತಾಲೂಕಿನ ರಾವೂರ್ ಗ್ರಾಮದ ಮಕ್ಕಾ ಮಜೀದ್‌ನಲ್ಲಿ ಈರಣ್ಣ ಗೌಡಾ ಯರಗಲ್ ಮತ್ತು ಗುರುಶಾಂತಲಿಂಗ್ ಆಗ್ರು ಅವರ ನೇತೃತ್ವದಲ್ಲಿ ಇತ್ತೀಚೆಗೆ ಸೌಹಾರ್ದ...